ಗಣಿಧಣಿ ಕಟ್ಟಿ ಹಾಕಲು ಬಿಜೆಪಿ ರಣತಂತ್ರ , ರೆಡ್ಡಿ ವಿರುದ್ಧ ಬಿ.ಎಲ್ ಸಂತೋಷ್ ಪ್ರಚಾರ

Apr 3, 2023, 9:56 AM IST

ಜನಾರ್ದನ ರೆಡ್ಡಿಗೆ ಟಕ್ಕರ್ ನೀಡಲು ಬಿಜೆಪಿ ಮುಂದಾಗಿದ್ದು  ಸಾಲು ಸಾಲು ಸಮಾವೇಶ ಮಾಡುತ್ತಿದೆ. ರೆಡ್ಡಿ ಸ್ಪರ್ಧಿಸುವ ಕ್ಷೇತ್ರದ ಪಕ್ಕದಲ್ಲೇ BL ಸಂತೋಷರಿಂದ ಕಾರ್ಯಕ್ರಮ ಮಾಡಲಾಗಿದ್ದು ಗಂಗಾವತಿ ತಾ. ಮರಳಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಬಿಜೆಪಿ ಡಿಜಿಟಲ್ ಸಮ್ಮೇಳದಲ್ಲಿ ಭಾಗಿಯಾದ ಬಿ.ಎಲ್ ಸಂತೋಷ್ ರೆಡ್ಡಿ ವಿರುದ್ಧ  ಪ್ರಚಾರ ಮಾಡಿದರು. ಇನ್ನು ಪ್ರಸ್ತುತ ಗಂಗಾವತಿ ಶಾಸಕರಾಗಿರುವ ಬಿಜೆಪಿಯ ಪರಣ್ಣ ಮುನವಳ್ಳಿಯನ್ನು ಶತಾಯಗತಾಯ ಗಂಗಾವತಿಯಲ್ಲಿ ಗೆಲ್ಲಬೇಕೆಂದು ಬಿಜೆಪಿ ಪಣತೊಟ್ಟಿದ್ದು, ಹೀಗಾಗಿ ಬಿಜೆಪಿ‌ಯಿಂದ ಗಂಗಾವತಿಯಲ್ಲಿ ನಿರಂತರ ಪ್ರಚಾರ ಕಾರ್ಯ ನಡೆಯುತ್ತಿದೆ.  ಅದಲ್ಲದೆ ಗಂಗಾವತಿ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಬಿ.ಎಲ್ ಸಂತೋಷ್ಗೆ ಮಾಹಿತಿ ಪಡೆದಿದ್ದು, ಶಾಸಕ ಪರಣ್ಣ ಮುನವಳ್ಳಿ, ಮುಖಂಡರೊಂದಿಗೆ  ಚರ್ಚೆ ಮಾಡಿದ್ದಾರೆ