Today Horoscope : ನಿಮ್ಮ ಇಂದಿನ ಭವಿಷ್ಯ ಹೇಗಿದೆ?, ಇಂದು ಯಾರಿಗೆ ಶುಭ- ಅಶುಭ ..

May 14, 2023, 9:39 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಕೃಷ್ಣ ಪಕ್ಷ, ಭಾನುವಾರ, ದಶಮಿ ತಿಥಿ, ಶತಭಿಷ ನಕ್ಷತ್ರ.  

ಈ ವೈಶಾಖ ಶುದ್ಧ ದಶಮಿಯನ್ನು ಕೆಲವರು ಆಂಜನೇಯನ ಜನ್ಮ ದಿನವೆಂದು ಆಚರಿಸುತ್ತಾರೆ. ವೈಶಾಖ ಕೃಷ್ಣ ದಶಮಿಯಂದು ಸಹ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಇದರಲ್ಲಿ ಗೊಂದಲವಿದ್ದು, ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು ರಾಮಾಯಣದಲ್ಲಿ ಮಾತ್ರ. ಹೀಗಾಗಿ ನಾವು ಮೂಲ ರಾಮಾಯಣ ನೋಡಬೇಕಾಗುತ್ತದೆ. ಇದರಲ್ಲಿ ಹನುಮಂತನ ಜಯಂತಿ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಇದಕ್ಕೆ ಉತ್ತರ ಸ್ಕಂದ ಪುರಾಣದಲ್ಲಿ ಸಿಗುತ್ತದೆ. ಇದರಲ್ಲಿ ಚೈತ್ರ ಪೌರ್ಣಮಿಯಂದು ಹನುಮ ಜಯಂತಿ ಎಂದು ಹೇಳಲಾಗುತ್ತದೆ. ಆದ್ರೆ ಪಂಚಾಂಗಗಳಲ್ಲಿ ಇಂದು ಹನುಮಜಯಂತಿ ಎಂದು ಇದೆ. ಆದ್ರೆ ನಿಜವಾದ ಆಧಾರ ರಾಮಾಯಣವಾಗಿದೆ. ಅದೇನೆ ಇರಲಿ ಇಂದು ಹನುಮನಿಗೆ ನಮಸ್ಕರಿಸುತ್ತಾ, ಇಂದಿನ ಭವಿಷ್ಯ ಏನಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ವೀಕ್ಷಿಸಿ: Karnataka Election Result 2023 ರಾಜ್ಯ ಬಿಜೆಪಿಗೆ ಪಾಠ ಕಲಿಸಿದ ಮತದಾರ, ಕರ್ನಾಟಕದಲ್ಲಿ ಕಾಂಗ್ರೆಸ್ ಕೈಗೆ ಅಧಿಕಾರ!