Today Horoscope: ಇಂದು ಮಹಾಲಯ ಅಮಾವಾಸ್ಯೆ ಇದ್ದು, ಪಿತೃಗಳ ಸ್ಮರಣೆಯಿಂದ ಏನೆಲ್ಲಾ ಫಲ ಸಿಗಲಿದೆ ಗೊತ್ತಾ..?

Oct 14, 2023, 8:49 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶನಿವಾರ,  ಅಮಾವಾಸ್ಯೆ ತಿಥಿ, ಹಸ್ತ ನಕ್ಷತ್ರ.

ಇಂದು ಮಹಾಲಯ ಅಮಾವಾಸ್ಯೆ ಇದ್ದು, ಈ ದಿನ ನಮ್ಮನ್ನು ಅಗಲಿದ ಪೂರ್ವಜರಿಗೆ ಶ್ರಾದ್ಧವನ್ನು ಮಾಡಿ. ಈ ವರ್ಷ ಶನಿವಾರ ಮಹಾಲಯ ಅಮಾವಾಸ್ಯೆ ಬಂದಿದ್ದು, ಪಿತೃ ತರ್ಪಣವು ನಿಮ್ಮ ಮನೆಯಲ್ಲಿ ಶನಿದೇವ ಮತ್ತು ಪೂರ್ವಜರ ಆಶೀರ್ವಾದಕ್ಕೆ ಕಾರಣವಾಗುತ್ತದೆ. ಮರಣ ಹೊಂದಿರುವ ಪೂರ್ವಜರು ಇಂದು ನಿಮ್ಮನ್ನು ನೋಡಲು ಬರುತ್ತಾರೆ ಎಂಬುದು ನಂಬಿಕೆಯಾಗಿದೆ.  

ಇದನ್ನೂ ವೀಕ್ಷಿಸಿ:  ತನ್ನ ಕೆಣಕಿದವರ ಜಾಗ ಖಾಲಿ ಮಾಡಿಸಿದ ಇಸ್ರೇಲ್‌, ಗಾಜಾ ಪ್ರಜೆಗಳಿಗೆ ಊರುಬಿಡಲು ಐಡಿಎಫ್‌ ಆರ್ಡರ್‌!