Today Horoscope: ಕರ್ಕಟ ರಾಶಿಗೆ ಪ್ರವೇಶ ಮಾಡುತ್ತಿರುವ ಬುಧ: ಇಂದು ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ..

Jul 8, 2023, 9:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಶನಿವಾರ, ಷಷ್ಠಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ.

ಈ ದಿನ ಬುಧ ಗ್ರಹ ತನ್ನ ಸ್ವಕ್ಷೇತ್ರದಿಂದ, ಕರ್ಕಟ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಕರ್ಕಟ ಅಂದ್ರೆ ಚಂದ್ರ, ಬುಧನಿಗೆ ಆತನನ್ನು ಕಂಡರೇ ಆಗುವುದಿಲ್ಲ. ಚಂದ್ರ ಬುಧನ ತಂದೆಯಾಗಿದ್ದಾನೆ. ಬುಧ ಬುದ್ಧಿವಂತಿಕೆಗೆ ಅಧಿಪತಿಯಾಗಿದ್ದು, ಎಲ್ಲಾ ರಾಶಿಯವರಿಗೂ ತೊಂದರೆ ಇದೆ. ಶನಿವಾರ ಷಷ್ಠಿ ಬಂದಿರುವುದರಿಂದ ಸುಬ್ರಹ್ಮಣ್ಯ ಸ್ವಾಮಿಗೆ ಸ್ವಲ್ಪ ಕೊಬ್ಬರಿ ಹಾಗೂ ಕಲ್ಲು ಸಕ್ಕರೆ ಕೊಟ್ಟರೆ ಒಳ್ಳೆಯದು ಆಗಲಿದೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ಸರ್ಕಾರದ 10 ಯೋಜನೆಗೆ ತಡೆ, ಉಚಿತ ಗ್ಯಾರೆಂಟಿ ಜೊತೆ ಹೊಸ ಕಾರ್ಯಕ್ರಮ ಘೋಷಣೆ!