Today Horoscope: ಇಂದು ಸಂಕಷ್ಟ ಹರ ಚತುರ್ಥಿ, ಪೂಜೆ ವಿಧಾನ, ಮಹತ್ವ ತಿಳಿಯಿರಿ..

Jul 6, 2023, 8:52 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಗುರುವಾರ, ತೃತೀಯ ತಿಥಿ, ಶ್ರವಣ ನಕ್ಷತ್ರ.

ಈ ದಿನ ಸಂಕಷ್ಟ ಹರ ಚತುರ್ಥಿ ಇದೆ. ಜೊತೆಗೆ ಇಂದು ಗ್ರಹ ಪಲ್ಲಟವಿದೆ. ಚಂದ್ರ ರಾಶಿಯಲ್ಲಿದ್ದ ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಅಂದರೆ ಶತ್ರುವಿನ ಮನೆಗೆ ಶುಕ್ರ ಪ್ರವೇಶಿಸುತ್ತಿದ್ದಾನೆ. ಯಾರಿಗೆ ಶುಕ್ರ ದೆಸೆ ನಡೆಯುತ್ತಿದೆಯೋ, ಅವರಿಗೆ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ಇಂದು ಗುರು ಸ್ಮರಣೆಯನ್ನು ಮಾಡಿ. ಗುರುವಿನ ಅನುಗ್ರಹ ನಿಮಗೆ ಇರಲಿದೆ. 

ಇದನ್ನೂ ವೀಕ್ಷಿಸಿ:  ಯತೀಂದ್ರ ಸಿದ್ದರಾಮಯ್ಯ ಸ್ಥಾನಮಾನ ಕೇಳಿದ್ದರ ಕಾರಣ ಬಹಿರಂಗ: ಸಣ್ಣ ಹುದ್ದೆಯಾದ್ರೂ ಕೊಡಿ