Panchang: ಇಂದು ಶನಿವಾರ, ಶನೈಶ್ಚರನ ಪ್ರಾರ್ಥನೆ ಮಾಡಿ..

Apr 15, 2023, 9:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಶನಿವಾರ, ದಶಮಿ ತಿಥಿ, ಶ್ರವಣ ನಕ್ಷತ್ರ ಉಪರಿ ಧನಿಷ್ಠ ನಕ್ಷತ್ರ.  

ಶ್ರವಣ ಹಾಗೂ ಧನಿಷ್ಠ ಎರಡೂ ಶುಭ ನಕ್ಷತ್ರಗಳು. ಶ್ರವಣ ನಕ್ಷತ್ರವು ಶ್ರೀನಿವಾಸನ ನಕ್ಷತ್ರವಾಗಿದ್ದು, ಈ ನಕ್ಷತ್ರದಲ್ಲಿ ಜನಿಸಿದವರು ಶ್ರೀಮಂತರಾಗುತ್ತಾರೆ ಎನ್ನಲಾಗುತ್ತದೆ. ದಶಮಿ ಕೂಡಾ ಪೂರ್ಣ ತಿಥಿಯಾಗಿದ್ದು ಕಾಲ ಒಳ್ಳೆಯದಿದೆ. ಶನಿವಾರವಾದ್ದರಿಂದ ಶನೈಶ್ಚರನಲ್ಲಿ ಪ್ರಾರ್ಥಿಸಿ  ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ರಾಹುಗ್ರಸ್ಥ ಸೂರ್ಯಗ್ರಹಣ; ದೇಶ ವಿದೇಶದ ಮೇಲೇನು ಪರಿಣಾಮ? ಪ್ರಕೃತಿ ವಿಕೋಪ ಕಾರಕವೇ?