Panchanga: ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆಯಿಂದ ಮನದ ಸಂಕಲ್ಪ ಈಡೇರಿಸುವಳು ತಾಯಿ

Jan 21, 2022, 8:26 AM IST

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು, ಇಂದಿನ ಪಂಚಾಂಗ ಫಲಗಳನ್ನು ನೋಡೋಣ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಮಖಾ ನಕ್ಷತ್ರ, ಇಂದು ಶುಕ್ರವಾರ. ಸಂಕಷ್ಟಹರ ಚತುರ್ಥಿಯೂ ಇದೆ. ಶುಕ್ರವಾರ ಲಲಿತಾ ಪರಮೇಶ್ವರಿಯ ಆರಾಧನೆ ಮಾಡಬೇಕು. ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಠಣ ಮಾಡುವುದರಿಂದ ಸೌಮಂಗಲ್ಯ ವೃದ್ಧಿಯಾಗುವುದು. ಮನಸ್ಸಿಗೆ ಸಮಾಧಾನ ಸಿಗುವುದು.