Today Horoscope: ಈ ರಾಶಿಯವರಿಗೆ ಇಂದು ಶತ್ರುಗಳ, ಸಾಲ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

Jun 18, 2024, 8:35 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಮಂಗಳವಾರ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರ.

ಸ್ವಾತಿ ನಕ್ಷತ್ರ ನರಸಿಂಹಸ್ವಾಮಿಗೆ ಶ್ರೇಷ್ಠವಾದ ನಕ್ಷತ್ರವಾಗಿದ್ದು, ಇವರು ಧರ್ಮಿಷ್ಠರಾಗಿರುತ್ತಾರೆ. ಈ ದಿನ ನರಸಿಂಹಸ್ವಾಮಿ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ, ಇದರಿಂದ ಒಳಿತಾಗಲಿದೆ. ಕತ್ತಲಿನಿಂದ ಬೆಳಕಿನೆಡೆಗೆ ಬರಬೇಕಾದರೆ, ನರಸಿಂಹನ ಕೃಪೆ ಬೇಕಾಗುತ್ತದೆ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲವಿದ್ದು, ಸ್ತ್ರೀಯರಿಗೆ ಸಹಕಾರ. ಹೆಚ್ಚಿನ ವ್ಯಯ. ಕಾಲಿಗೆ ಪೆಟ್ಟಾಗಲಿದೆ. ವಿಷ್ಣು ಸಹಸ್ರನಾಮ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಗ್ಯಾರಂಟಿ ಯೋಜನೆಗಾಗಿ ಪೆಟ್ರೋಲ್ ಬೆಲೆ ಏರಿಸಿದ್ರಾ..? ಎಡವಟ್ಟಿಗೆಲ್ಲಾ ಗ್ಯಾರಂಟಿನೇ ಕಾರಣನಾ..?