ದೇವೇಗೌಡ್ರ ಮಧ್ಯಂತರ ಎಲೆಕ್ಷನ್ ಬಾಂಬ್: ಇತ್ತ ದಿಢೀರ್ ಸಭೆ ನಡೆಸಿದ ಸಿದ್ದು..!

Jun 23, 2019, 6:42 PM IST

ಮೈಸೂರು, [ಜೂ.23]: ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ರಾಜ್ಯದಲ್ಲಿ ಮಂಧ್ಯಂತರ ಚುನಾವಣೆ ಬಾಂಬ್ ಸಿಡಿಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅತ್ತ ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರ ದಿಢೀರ್ ಸಭೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಮೈಸರಿನಲ್ಲಿ ಇಂದು [ಭಾನುವಾರ] ಖಾಸಗಿ ಹೋಟೆಲ್ ನಲ್ಲಿ ಪುತ್ರ ಯತೀಂದ್ರ ಅವರ ವರುಣಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜತೆ  ಸೀಕ್ರೆಟ್ ಮಿಟಿಂಗ್ ಮಾಡಿದರು. ಚಾಮುಂಡೇಶ್ವರಿಯಲ್ಲಿ ತಮ್ಮ ಸೋಲಿನ ಬಗ್ಗೆಯೂ ಇಷ್ಟು ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ, ಇದೀಗ ತವರಿನಲ್ಲಿ ಸಿದ್ದರಾಮಯ್ಯ ಸಭೆಗಳ ಲೆಕ್ಕಚಾರಗಳೇನು ಎನ್ನುವುದು ಮಾತ್ರ ನಿಗೂಢವಾಗಿದೆ.