ಹೊಸಕೋಟೆ ಅಖಾಡ: ಎಂಟಿಬಿಯನ್ನು ಗುಳ್ಳೆನರಿ ಎಂದ ಶರತ್ ಬಚ್ಚೇಗೌಡ!

Sep 26, 2019, 5:06 PM IST

ಬೆಂಗಳೂರು(ಸೆ.26): ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ರಂಗೇರಿದ್ದು, ಶರತ್ ಬಚ್ಚೇಗೌಡ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಗುಳ್ಳೆನರಿ ಎಂದು ಕರೆದಿದ್ದಾರೆ. 2004ಕ್ಕಿಂತಲೂ ನಮ್ಮ ಕ್ಷೇತ್ರ ಸಿಂಹಗಳ ರಾಜಕೀಯ ನೋಡುತ್ತಿತ್ತು. ಆದರೆ ತದನಂತರ ಗುಳ್ಳೆನರಿಗಳ ರಾಜಕೀಯ ನೋಡುತ್ತಿದೆ ಎಂದು ಪರೋಕ್ಷವಾಗಿ ನಾಗರಾಜ್ ಅವರನ್ನು ಚುಚ್ಚಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಮೇಲೆ ಅಪಾರ ಗೌರವವಿದ್ದು, ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಇದೇ ವೇಳೆ ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...