ಇಲ್ಲಿ ಖಜಾನೆ ಖಾಲಿ, ಅಲ್ಲಿ ಸಿಎಂ ಸಭೆಯಲ್ಲಿ ಕುರ್ಚಿಗಳೂ ಖಾಲಿ ಖಾಲಿ!

Oct 4, 2019, 12:35 PM IST

ಬೆಳಗಾವಿ (ಅ.04): ಒಂದೆಡೆ ರಾಜ್ಯ ಬೊಕ್ಕಸ ಖಾಲಿ ಖಾಲಿ, ಇನ್ನೊಂದೆಡೆ ಸಿಎಂ ಕರೆದ ಸಭೆಯಲ್ಲೂ ಕುರ್ಚಿಗಳು ಖಾಲಿ ಖಾಲಿ. ಹೌದು, ಬೆಳಗಾವಿಯಲ್ಲಿಂದು ಇಂತಹ ಘಟನೆ ನಡೆದಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ನಡೆಯಬೇಕಾಗಿದ್ದ ಅಹವಾಲು ಸಭೆಗೆ ನೆರೆ ಸಂತ್ರಸ್ತರೇ ಬಂದಿಲ್ಲ!

ಸಿಎಂ ಬಿ.ಎಸ್. ಯಡಿಯೂರಪ್ಪ ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದಾರೆ. ನೆರೆ ಪರಿಹಾರ ಪರಿಶೀಲನೆ ಸಭೆಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಅವರ ‘ಖಜಾನೆ ಖಾಲಿ’ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲಿದೆ ವಿವರ...