ನಿಲುವು ಬದಲಿಸಿದ ರಾಮಲಿಂಗ ರೆಡ್ಡಿ ಒಲವು ಬದಲಾಗಿಲ್ಲ!

Jul 9, 2019, 4:28 PM IST

ಬೆಂಗಳೂರು (ಜು.09): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗ ರೆಡ್ಡಿ, ಇಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಿಂದ ದೂರವುಳಿದಿದ್ದಾರೆ. ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ, ನಾನು ಎಲ್ಲಿಗೂ ಹೋಗಲ್ಲ, ಕಾಂಗ್ರೆಸ್‌ನಲ್ಲೇ ಇರ್ತೇನೆ, ಸ್ಪೀಕರ್ ಕರೆದಾಗ ಹೋಗುತ್ತೇನೆ ಎಂದು ಹೇಳಿದರು. ಇನ್ನೊಂದು ಕಡೆ, ರಾಮಲಿಂಗ ಪುತ್ರಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು.