ಟ್ರಾಫಿಕ್ ಪೊಲೀಸ್ ಆದ BSY,  ಜನರನ್ನು ಮುಂದೆ ಕಳಿಸಿ ನಂತರ ಹೋದ್ರು!

Sep 26, 2019, 9:38 PM IST

ಬೆಂಗಳೂರು[ಸೆ. 26]  ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಿಂದ ತೆರಳುತ್ತಿದ್ದ ವೇಳೆ ಟ್ರಾಫಿಕ್ ಸಮಸ್ಯೆ ಕಂಡಿದ್ದಾರೆ. ಸಿಎಂ ತೆರಳುವವರಿದ್ದಾರೆ ಎಂದು ಪೊಲೀಸರು ವಾಹನಗಳ ಸಂಚಾರ ಬಂದ್ ಮಾಡಿದ್ದರು.  ಈ ವೇಳೆ ಸಿಎಂ ಮಾಧ್ಯಮದವರ ಬಳಿ ಮಾತನಾಡಲು ಬಂದಿದ್ದಾರೆ. ಆಗ ಮತ್ತಷ್ಟು ಜಾಮ್ ಆಗಿದೆ. ಇದೆಲ್ಲವನ್ನು ಕಂಡ ಬಿಎಸ್ ವೈ ತಾವೇ ಮುಂದಾಗಿ ನಾಗರಿಕರ ವಾಹನಗಳನ್ನು ಮುಂದೆ ಬಿಟ್ಟು ನಂತರ ತೆರಳಿದ್ದಾರೆ. ಸಿಎಂ ಡಾಲರ್ಸ್ ಕಾಲೋನಿ ನಿವಾಸದಿಂದ ಪೇಜಾವರ ಸ್ವಾಮೀಜಿ ಭೇಟಿಗೆ ಬನಶಂಕರಿ ಕಡೆ ತೆರಳುವರಿದ್ದರು.