ಕನ್ನಡದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಗೃಹ ಸಚಿವರ ಖಡಕ್ ಮಾತು

Sep 16, 2019, 9:26 PM IST

ಬೆಂಗಳೂರು, [ಸೆ.16]: ಒಂದು ದೇಶ- ಒಂದು ಭಾಷೆ ವಿಚಾರದ ಕುರಿತು ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿದ್ದೇವೆ, ಅದಕ್ಕೆ ಬದ್ಧವಾಗಿದ್ದೇವೆ. ಸಂವಹನಕ್ಕಾಗಿ ಭಾಷೆ ಬೇಕು, ನಾವು ತ್ರಿಭಾಷಾ ಸೂತ್ರವನ್ನು ನೆಚ್ಚಿಕೊಂಡಿದ್ದೇವೆ. ಭಾಷಾ ವಿಚಾರದಲ್ಲಿ ಸ್ಪಷ್ಟತೆ ಇದೆ. ಕನ್ನಡದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಹೇಳಿಕೆ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ.