ತಜಕಿಸ್ತಾನ ಗಡಿಯಲ್ಲಿ ಅಮಾಯಕರ ಕೊಂದು ತಾಲೀಬಾನ್ ಅಟ್ಟಹಾಸ

Oct 7, 2021, 3:58 PM IST

ಗೆದ್ದ ಜೋಶ್‌ನಲ್ಲಿರುವ ತಾಲೀಬಾನ್ ಮುಂದಿನ ಗುರಿ ಪಾಕಿಸ್ತಾನ. ಅಧಿಕಾರಕ್ಕೆ ಬಂದ ಮೇಲೆ ತಾಲೀಬಾನಿಗಳು(Taliban) ಮತ್ತಷ್ಟು ಕ್ರೂರತನದಿಂದ ಅಮಾಯಕರ ಮೇಲೆ ತಮ್ಮ ಶಕ್ತಿ ತೋರಿಸುತ್ತಿದ್ದಾರೆ. ತಜಕಿಸ್ತಾನದಲ್ಲಿ ಈಗಾಗಲೇ ಅಮಾಯಕರನ್ನು ಅಮಾನವೀಯವಾಗಿ ಕೊಂದು ಹಾಕುತ್ತಿರುವ ತಾಲೀಬಾನಿಗಳಿಗೆ ನರ ಸಂಹಾರವೇ ಉದ್ಯೋಗವಾಗಿ ಬಿಟ್ಟಿದೆ.

ಸಿಖ್ ಗುರುದ್ವಾರದ ಮೇಲೆ ತಾಲಿಬಾನ್ ದಾಳಿ, ಜನರು ವಶಕ್ಕೆ, ದೇಗುಲ ಧ್ವಂಸ!

ಗಡಿಗಳಲ್ಲಿ ಗನ್ ಹಿಡಿದು ಸುತ್ತುತ್ತಿರುವ ತಾಲೀಬಾನಿಗಳು ಜನರ ಮೇಲೆ ಬೇಕಾಬಿಟ್ಟಿ ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ. ಕಾರಣವೇ ಇಲ್ಲದೆ ಕೈಯಲ್ಲಿರುವ ಗನ್(Gun) ಹಿಡಿದು ಸಿಕ್ಕಸಿಕ್ಕವರನ್ನು ಕೊಂದು ಹಾಕುತ್ತಿದ್ದಾರೆ.