ಬೈಕ್ ಹಿಂದಿಕ್ಕಿದ ನೆಪವೊಡ್ಡಿ KSRTC ಬಸ್ ಚಾಲಕನ ಮೇಲೆ ಹಲ್ಲೆ

Nov 12, 2019, 6:53 PM IST

ಚಾಮರಾಜನಗರ(ನ.12): ಬೈಕ್ ಹಿಂದಿಕ್ಕಿ ತೆರಳಿದ ಕಾರಣಕ್ಕೆ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಓವರ್ ಟೇಕ್ ವೇಳೆ ಕಣ್ಣಿಗೆ ಧೂಳಾಗಿದೆ ಎಂದು ಹೇಳಿ ಬೈಕ್ ಸವಾರ ಬಸ್ ನಿಲ್ಲಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ

ಇದನ್ನೂ ಓದಿ: ಜೊಮ್ಯಾಟೋ ಡೆಲಿವರಿ ಬಾಯ್ಸ್ ಪುಂಡಾಟ; ಆರ್ಡರ್ ಲೇಟ್ ಕೊಟ್ಟದ್ದಕ್ಕೆ ಅಟ್ಟಾಡಿಸಿ ಹಲ್ಲೆ

ಚಾಮರಾಜನಗರದ ಸಮೀಪ ಸಂತೇಮಾರನಹಳ್ಳಿಯಲ್ಲಿ KSRTC ಬಸ್ ಮುಂದೆ ಬೈಕ್ ಚಲಿಸುತ್ತಿತ್ತು. ಮುಂಭಾಗದಿಂದ ಯಾವುದೇ ವಾಹನವಿಲ್ಲ ಎಂದು ಗಮನಿಸಿದ ಬಸ್ ಚಾಲಕ ಬೈಕ್ ಓವರ್ ಟೇಕ್ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಬೈಕ್ ಸವಾರ ಸೈಯದ್ ಸಮೀಉಲ್ಲ ಹೈಲ್ಲೆ ಮಾಡಿದ್ದಾನೆ. ಬಸ್ ಚಾಲಕ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.