'ಯತ್ನಾಳ್ ವಿರುದ್ಧ ವಾಟಾಳ್ ಹೋರಾಟ ರಾಜಕೀಯ ಗಿಮಿಕ್ '

Dec 1, 2020, 1:57 PM IST

ಬೆಂಗಳೂರು (ಡಿ. 01): ವಿಜಯಪುರದಲ್ಲಿ ವಾಟಾಳ್ VS ಯತ್ನಾಳ್ ಸಮರ ಶುರುವಾಗಿದೆ. ಮರಾಠ ಪ್ರಾಧಿಕಾರ ವಿರೋಧಿಸಿ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಕನ್ನಡ ಪರ ಸಂಘಟನೆಗಳನ್ನು ಯತ್ನಾಳ್ ರೋಲ್‌ಕಾಲ್ ಎಂದು ಜರಿದಿದ್ದರು. 

ಯತ್ನಾಳ್ ಸವಾಲ್‌ಗೆ ವಾಟಾಳ್ ಉತ್ತರ; ವಿಜಯಪುರದಲ್ಲಿಂದು ಕನ್ನಡ ಪರ ಸಂಘಟನೆಗಳ ಶಕ್ತಿ ಪ್ರದರ್ಶನ

ಇಂದು ವಿಜಯಪುರದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ಯತ್ನಾಳ್‌ಗೆ ಟಾಂಗ್ ನೀಡಿವೆ. ಯತ್ನಾಳ್ ವಿರುದ್ಧ ವಾಟಾಳ್ ಹೋರಾಟ ರಾಜಕೀಯ ಗಿಮಿಕ್ ಎಂದು ಸ್ವಾಮಿ ವಿವೇಕಾನಮದ ಸೇನೆಯ ರಾಘವ ಅಣ್ಣಿಗೇರಿ ವಾಗ್ದಾಳಿ ನಡೆಸಿದ್ದಾರೆ.