ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..? ಕಾಂಟ್ಯಾಕ್ಟರ್ ಮನೆಯಲ್ಲಿ ಸಿಕ್ಕ ಹಣ ಯಾರದ್ದು..?

ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..? ಕಾಂಟ್ಯಾಕ್ಟರ್ ಮನೆಯಲ್ಲಿ ಸಿಕ್ಕ ಹಣ ಯಾರದ್ದು..?

Published : Oct 15, 2023, 01:02 PM IST

2 ಕೋಟಿ ಐಟಿ ಬೇಟೆಯ ಸುತ್ತ 42 ರಹಸ್ಯ..!
ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..?
42 ಕೋಟಿಗಳ ಕುತ್ತು..ಯಾರಿಗೆ ಕಾದಿದೆ ಆಪತ್ತು..?

ರಾಜ್ಯದಲ್ಲಿ ನಡೆದ ಐಟಿ ದಾಳಿಗಳಲ್ಲೇ ಇದು ಭರ್ಜರಿ ಬೇಟೆ. ಗುತ್ತಿಗೆದಾರನ(Contractors) ಮನೆಯ ಮಂಚದ ಕೆಳಗೆ ಐಟಿ ಅಧಿಕಾರಿಗಳಿಗೆ ಸಿಕ್ಕಿರೋದು ಬರೋಬ್ಬರಿ 42+ ಕೋಟಿ ರೂಪಾಯಿ. 42 ಗಂಟೆಗಳ ಮೆಗಾ ಆಪರೇಷನ್‌ನಲ್ಲಿ ಬಯಲಾಗಿದೆ ಕುರುಡು ಕಾಂಚಾಣ ಮಹಿಮೆ. ಬೆಂಗಳೂರಿನ(Bengaluru) ಗುತ್ತಿಗೆದಾರ ಕಮ್ ಉದ್ಯಮಿ, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿದ್ದ ಅಂಬಿಕಾಪತಿಯ(Ambikapati) ಕೋಟಿ ಸಾಮ್ರಾಜ್ಯದ ಮೇಲೆ ಗುರುವಾರ ಸಂಜೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ (It Raid) ನಡೆಸಿದ್ರು. ಬೆಂಗಳೂರಿನ ಕಾವಲ್‌ಭೈರಸಂಧ್ರದ ಗಣೇಶ ಬ್ಲಾಕ್‌ನಲ್ಲಿರುವ ಅಂಬಿಕಾಪತಿ ಮನೆ, ಆರ್.ಟಿ ನಗರದ ವೈಟ್ ಹೌಸ್‌ನಲ್ಲಿರುವ ಪುತ್ರನ ಮನೆ, ಮಾನ್ಯತಾ ಟೆಕ್ ಪಾರ್ಕ್ ಬಳಿ ಇರೋ ಮಗಳ ಮನೆ.ಹೀಗೆ ಅಂಬಿಕಾಪತಿಗೆ ಸೇರಿದ 3 ಸ್ಥಳಗಳಲ್ಲಿ ತಲಾಷ್ ನಡೆಸಿದ ಐಟಿ ಅಧಿಕಾರಿಗಳಿಗೆ ಸಿಕ್ಕಿರೋದು ಸಣ್ಣ ಮೊತ್ತವಲ್ಲ. ಅಂಬಿಕಾಪತಿ ಮಗನ ಮನೆಯ ಮಂಚದ ಕೆಳಗಂತೂ 22 ಬಾಕ್ಸ್‌ಗಳಲ್ಲಿ ತುಂಬಿಡಲಾಗಿದ್ದ ಗರಿ ಗರಿ ನೋಟುಗಳನ್ನು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಲೆಕ್ಕ ಹಾಕಿ ನೋಡಿದಾಗ ಸಿಕ್ಕಿರೋ ಹಣ 42 ಕೋಟಿಗೂ  ಹೆಚ್ಚು. ಆದರೆ ಈ ಐಟಿ ದಾಳಿಗೂ ಗುತ್ತಿಗೆದಾರ ಅಂಬಿಕಾಪತಿಗೂ ಯಾವುದೇ ಸಂಬಂಧ ಇಲ್ಲ ಅಂತಿದ್ದಾರೆ ಪುತ್ರ ಪ್ರದೀಪ್. ಐಟಿ ದಾಳಿ ಹೀಗೆ ಬಾಕ್ಸ್‌ಗಳಲ್ಲಿ ಕೋಟಿ ಕೋಟಿ, ಗರಿಗರಿ ನೋಟುಗಳ ಕಂತೆ ಸಿಕ್ಕಿರೋದು ಇದೇ ಪ್ರದೀಪ್ ಮನೆಯಲ್ಲಿ. ಅಂಬಿಕಾಪತಿ 20 ವರ್ಷಗಳ ಹಿಂದೆಯೇ ಕಾಂಟ್ರಾಕ್ಟರ್ ಕೆಲಸ ಬಿಟ್ಟಿದ್ರಂತೆ. ನಂತ್ರ ಆ ವೃತ್ತಿಯನ್ನು ಪುತ್ರ ಪ್ರದೀಪ್ ಮುಂದುವರಿಸಿದ್ದಾರೆ. ಪ್ರಮೋದ್ ಎಂಬ ಸ್ನೇಹಿತನ ಜೊತೆ ಸೇರಿ ಪ್ರದೀಪ್ ಗುತ್ತಿಗೆದಾರ ಕೆಲಸ ಮಾಡ್ತಾ ಇದ್ರು.

ಇದನ್ನೂ ವೀಕ್ಷಿಸಿ:  ಬಸವನಗುಡಿ ವಾರ್ಡ್‌ ಹೆಸರು ಬದಲಾವಣೆ: ಹೋರಾಟದ ಎಚ್ಚರಿಕೆ ನೀಡಿದ ನಿವಾಸಿಗಳು

23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more