'ರೂಲ್ಸ್ ಇರೋದು ಜನರ ಒಳಿತಿಗೆ'  ರಸ್ತೆ ವಿಚಾರದಲ್ಲಿ ಮತ್ತೆ ಸುಮಲತಾ ಮಾತು!

Sep 1, 2021, 6:46 PM IST

ಬೆಂಗಳೂರು(ಸೆ. 01)  ಮತ್ತೆ ರಸ್ತೆ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಮಾತನಾಡಿದ್ದಾರೆ. ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ. ರಸ್ತೆ ಬೆಂಗಳೂರು ಮತ್ತು ಮೈಸೂರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮಂಡ್ಯದ ರೈತರು ಜಮೀನು ತ್ಯಾಗ ಮಾಡಿದ್ದಾರೆ. ಇಲ್ಲಿ ಸರ್ವೀಸ್ ರಸ್ತೆಯೂ ಇಲ್ಲ ಎಂದಿದ್ದಾರೆ.

ಸುಮಲತಾ ಹೇಳಿಕೆಗೆ ಪ್ರತಾಪ್ ಸಿಂಗ ಠಕ್ಕರ್

ರೈತರಿಗೆ ಸಮಸ್ಯೆ ಮಾಡುತ್ತ ರಸ್ತೆ ನಿರ್ಮಾಣ ಮಾಡುವುದರಲ್ಲಿ ಅರ್ಥವಿಲ್ಲ. ಬಡಜನರಿಗೆ ತೊಂದರೆ ನೀಡುತ್ತ ಪ್ರಾಜೆಕ್ಟ್ ಮಾಡುತ್ತೇವೆ ಎಂದರೆ ಹೇಗೆ? ರೂಲ್ಸ್ ಮಾಡಿರುವುದು ಜನರ ಉಪಯೋಗಕ್ಕೆ ಎಂದಿದ್ದಾರೆ.