ಕೊರೊನಾ ಜಾಗೃತಿಗಾಗಿ ಯಮ-ಕಿಂಕರನ ವೇಷ ತೊಟ್ಟು ರಸ್ತೆಗಿಳಿದ ಬಾಗೇಪಲ್ಲಿ ಪೊಲೀಸರು

May 1, 2020, 10:22 AM IST

ಬೆಂಗಳೂರು (ಮೇ. 01): ಕೊರೊನಾ ಜಾಗೃತಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಯಮ, ಚಿತ್ರಗುಪ್ತನ ವೇಷ ಧರಿಸಿ ಪೊಲೀಸ್ ಸಿಬ್ಬಂದಿ ಬೀದಿಗಿಳಿದಿದ್ದಾರೆ. ಮಾಸ್ಕ್ ಧರಿಸದಿದ್ದವರಿಗೆ, ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವವರಿಗೆ ಪಾತ್ರಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ. 

ಕೊರೊನಾ ವಾರಿಯರ್ಸ್‌ಗೆ ಪುಟಾಣಿ ಸಾಥ್; ಸಿಎಂ ಪರಿಹಾರ ನಿಧಿಗೆ 5 ಸಾವಿರ ಹಣ

ಬಾಗೇಪಲ್ಲಿ ಪಕ್ಕದಲ್ಲಿರೋ ಹಿಂದೂಪುರ ರೆಡ್‌ ಝೋನ್‌ನಲ್ಲಿರುವುದರಿಂದ ಜನರನ್ನು ಅಲರ್ಟ್ ಮಾಡಲು ಪೊಲೀಸರು ಹೊಸ ಪ್ರಯತ್ನ ಮಾಡಿದ್ದಾರೆ. ಇವರ ಪ್ರಯತ್ನಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.