ಸಾ ರಾ ಮಹೇಶ್‌ಗೆ ಬಿಗ್ ಶಾಕ್ : ಸಿಂಧೂರಿ ಹಾಕಿದ್ದ ಕೇಸ್‌ಗೆ ಮರುಜೀವ

Sep 4, 2021, 12:54 PM IST

ಮೈಸೂರು (ಸೆ.04):  ಜೆಡಿಎಸ್ ಶಾಸಕ ಸಾ ರಾ ಮಹೇಶ್‌ಗೆ ಬಿಗ್ ಶಾಕ್ ಎದುರಾಗಿದೆ. ಸಾ ರಾ ಮಹೇಶ್ ವಿರುದ್ದದ ಭೂ ಒತ್ತುವರಿ ಆರೋಪಕ್ಕೆ ಮರು ಜೀವ ಸಿಗುತ್ತಿದೆ. ರೋಹಿಣಿ ಸಿಂಧೂರಿ ಮಾಡಿದ್ದ ಆರೋಪಕ್ಕೆ ಇದೀಗ ಮರು ಜೀವ ಸಿಗುತ್ತಿದೆ. 

ಇದೀಗ ಪುನರ್ ಸರ್ವೆ ನಡೆಸಲು ಭೂ ದಾಖಲೆ ಇಲಾಖೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಮೈಸೂರು ಅಧಿಕಾರಿಗಳನ್ನು ಹೊರತುಪಡಿಸಿ 10 ದಿನಗಳಲ್ಲಿ ಸರ್ವೆ ಮಾಡಿ ವರದಿ ನೀಡಿ ಎಂದು ಸೂಚನೆ  ನೀಡಲಾಗಿದೆ.