Supreme court on EVM: ಇವಿಎಂ ಬಂದು 20 ವರ್ಷಗಳಾದ್ರು ಅನುಮಾನವೇಕೆ? ಕೆಲ ಪಕ್ಷಗಳು ಸೋತಾಗ ಇದರ ಮೇಲೆ ಸಂದೇಹವೇಕೆ..?

Supreme court on EVM: ಇವಿಎಂ ಬಂದು 20 ವರ್ಷಗಳಾದ್ರು ಅನುಮಾನವೇಕೆ? ಕೆಲ ಪಕ್ಷಗಳು ಸೋತಾಗ ಇದರ ಮೇಲೆ ಸಂದೇಹವೇಕೆ..?

Published : Apr 27, 2024, 05:26 PM IST

ಇವಿಎಂ ಅನುಮಾನಿಸಿ ಅರ್ಜಿ ಹಾಕಿದವರಿಗೆ ಬುದ್ದಿ ಹೇಳಿದ ಸುಪ್ರೀಂ
ಇವಿಎಂ ಬೇಡ..ಬ್ಯಾಲೆಟ್ ಪೇಪರ್ ಬೇಕು ಅಂದವರಿಗೆ ಸುಪ್ರೀಂ ಚಾಟಿ
ಕೇವಲ ಅನುಮಾನ ಪಟ್ಟರೆ ಕೋರ್ಟ್ ಒಪ್ಪುವುದಿಲ್ಲವೆಂದ ಸುಪ್ರೀಂ
ಚುನಾವಣಾ ಆಯೋಗಕ್ಕೆ ಎರಡು ಸಲಹೆ ಕೊಟ್ಟ ಸುಪ್ರೀಂ ಕೋರ್ಟ್


ಇವಿಎಂ ಮಷಿನ್ ಜೊತೆ ಜೊತೆಗೆ ವಿವಿ ಪ್ಯಾಟ್‌ನ ಚೀಟಿಗಳನ್ನೂ ಲೆಕ್ಕ ಹಾಕಬೇಕೆಂದು ಸುಪ್ರೀಂ ಕೋರ್ಟ್(Supreme Court) ಮೊರೆ ಹೋಗಲಾಗಿತ್ತು. ಹಾಗೆನೇ ಎಲೆಕ್ಷನ್ ವೋಟಿಂಗ್ ಸಂದರ್ಭದಲ್ಲಿ ಇವಿಎಂ ಮಷಿನ್(EVM machine) ಬದಲಾಗಿ, ಹಳೇ ಪದ್ಧತಿಯಾದ ಬ್ಯಾಲೆಟ್ ಪೇಪರ್(Ballot Paper) ವೋಟಿಂಗ್ ಅನ್ನೇ ಮರಳಿ ತರಬೇಕು ಅನ್ನೋ ಅರ್ಜಿ ಸಹ ಸುಪ್ರೀಂ ಕೋರ್ಟ್‌ನಲ್ಲಿತ್ತು. ನಿನ್ನೆ ಆ ಎಲ್ಲ ಅರ್ಜಿಗಳಿಗೆ ಸುಪ್ರೀಂ ಕೋರ್ಟ್ ಖಡಕ್ ಜವಾಬ್ ಕೊಟ್ಟಿದೆ. ದೇಶದಲ್ಲಿ ಮೊದಲ್ಲೆಲ್ಲ ಬ್ಯಾಲೆಟ್ ಪೇಪರ್ ಮೇಲೆ ದೇಶ ಮತ್ತು ರಾಜ್ಯಗಳ ವೋಟಿಂಗ್ ನಡೆಯುತ್ತಿತ್ತು. ಆದ್ರೆ 2004ರ ಲೋಕಸಭಾ ಚುಣಾವಣೆಯಲ್ಲಿ(Lok Sabha elections 2024) ಸಂಪೂರ್ಣ ಬ್ಯಾಲೆಟ್ ಪೇಪರ್ ಬ್ಯಾನ್ ಮಾಡಲಾಯ್ತು. ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮಷಿನ್ ಮುಖೇನ ವೋಟಿಂಗ್ ಪದ್ಧತಿ ದೇಶದಲ್ಲಿ ಜಾರಿಗೆ ಬಂತು. ದೇಶದಲ್ಲಿ ಇವಿಎಂ ಮಷಿನ್ ಪರಿಚಯವಾಗಿ 20 ವರ್ಷಗಳೇ ಕಳೆದಿವೆ. ಈ 20 ವರ್ಷಗಳಲ್ಲಿ ಹಲವು ಚುಣಾವಣೆಗಳು ನಡೆದಿವೆ. ಆದರು ಸಹ ಈಗಲೂ ಕೆಲವೊಂದಿಷ್ಟು ರಾಜಕೀಯ ಪಕ್ಷಗಳಿಗೆ ಇವಿಎಂ ಮಷಿನ್ ಮೇಲೆ ನಂಬಿಕೆ ಬಂದಂತಿಲ್ಲ. ತಮ್ಮ ಪಕ್ಷಕ್ಕೆ ಗೆಲುವು ಸಿಕ್ಕ ಸಂದರ್ಭದಲ್ಲಿ ಬಾಯಿ ಮುಚ್ಕೊಂಡು ಇರ್ತಾರೆ. ಸೋಲಾಗುತ್ತಿದ್ದಂತೆ ಸೋಲಿನ ಆರೋಪವನ್ನು ಇವಿಎಂ ಮಷಿನ್ ಮೇಲೆ ಹಾಕ್ತಾರೆ. ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಅಸೋಷಿಯೇಷನ್ ಫಾರ್  ಡೆಮಾಕ್ರಾಟಿಕ್  ರಿಫಾರ್ಮ್ಸ್ ಎಂಬ ಸಂಸ್ಥೆಯು ಇವಿಎಂ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತಮ್ಮ ಸಂಸ್ಥೆಗೆ ಇವಿಎಂ ಮಷಿನ್ ಕೌಂಟ್ ಮಾಡುವ ವೋಟ್ಗಳ ಬಗ್ಗೆ ಅನುಮಾನವಿದೆ. ಹೀಗಾಗಿ ಮುಂದೆ ಬರುವ ಎಲ್ಲ ಚುನಾವಣೆಗಳಲ್ಲೂ ಇವಿಎಂ ಮಷಿನ್ ವೋಟ್ ಕೌಂಟ್ಗಳ ಜೊತೆಗೆ ವಿವಿ ಪ್ಯಾಟ್ನ ಚೀಟಿಗಳನ್ನು ಲೆಕ್ಕ ಹಾಕಬೇಬೇಕು ಎಂಬ ಅರ್ಜಿಯನ್ನು ಹಾಕಿತ್ತು ಈ ಸಂಸ್ಥೆ.

ಇದನ್ನೂ ವೀಕ್ಷಿಸಿ:  Siddaramaiah: ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲು ನೀಡಿರುವುದು ನೂರಕ್ಕೆ ನೂರು ಸುಳ್ಳು: ಸಿಎಂ ಸಿದ್ದರಾಮಯ್ಯ

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more