Supreme court on EVM: ಇವಿಎಂ ಬಂದು 20 ವರ್ಷಗಳಾದ್ರು ಅನುಮಾನವೇಕೆ? ಕೆಲ ಪಕ್ಷಗಳು ಸೋತಾಗ ಇದರ ಮೇಲೆ ಸಂದೇಹವೇಕೆ..?

Supreme court on EVM: ಇವಿಎಂ ಬಂದು 20 ವರ್ಷಗಳಾದ್ರು ಅನುಮಾನವೇಕೆ? ಕೆಲ ಪಕ್ಷಗಳು ಸೋತಾಗ ಇದರ ಮೇಲೆ ಸಂದೇಹವೇಕೆ..?

Published : Apr 27, 2024, 05:26 PM IST

ಇವಿಎಂ ಅನುಮಾನಿಸಿ ಅರ್ಜಿ ಹಾಕಿದವರಿಗೆ ಬುದ್ದಿ ಹೇಳಿದ ಸುಪ್ರೀಂ
ಇವಿಎಂ ಬೇಡ..ಬ್ಯಾಲೆಟ್ ಪೇಪರ್ ಬೇಕು ಅಂದವರಿಗೆ ಸುಪ್ರೀಂ ಚಾಟಿ
ಕೇವಲ ಅನುಮಾನ ಪಟ್ಟರೆ ಕೋರ್ಟ್ ಒಪ್ಪುವುದಿಲ್ಲವೆಂದ ಸುಪ್ರೀಂ
ಚುನಾವಣಾ ಆಯೋಗಕ್ಕೆ ಎರಡು ಸಲಹೆ ಕೊಟ್ಟ ಸುಪ್ರೀಂ ಕೋರ್ಟ್


ಇವಿಎಂ ಮಷಿನ್ ಜೊತೆ ಜೊತೆಗೆ ವಿವಿ ಪ್ಯಾಟ್‌ನ ಚೀಟಿಗಳನ್ನೂ ಲೆಕ್ಕ ಹಾಕಬೇಕೆಂದು ಸುಪ್ರೀಂ ಕೋರ್ಟ್(Supreme Court) ಮೊರೆ ಹೋಗಲಾಗಿತ್ತು. ಹಾಗೆನೇ ಎಲೆಕ್ಷನ್ ವೋಟಿಂಗ್ ಸಂದರ್ಭದಲ್ಲಿ ಇವಿಎಂ ಮಷಿನ್(EVM machine) ಬದಲಾಗಿ, ಹಳೇ ಪದ್ಧತಿಯಾದ ಬ್ಯಾಲೆಟ್ ಪೇಪರ್(Ballot Paper) ವೋಟಿಂಗ್ ಅನ್ನೇ ಮರಳಿ ತರಬೇಕು ಅನ್ನೋ ಅರ್ಜಿ ಸಹ ಸುಪ್ರೀಂ ಕೋರ್ಟ್‌ನಲ್ಲಿತ್ತು. ನಿನ್ನೆ ಆ ಎಲ್ಲ ಅರ್ಜಿಗಳಿಗೆ ಸುಪ್ರೀಂ ಕೋರ್ಟ್ ಖಡಕ್ ಜವಾಬ್ ಕೊಟ್ಟಿದೆ. ದೇಶದಲ್ಲಿ ಮೊದಲ್ಲೆಲ್ಲ ಬ್ಯಾಲೆಟ್ ಪೇಪರ್ ಮೇಲೆ ದೇಶ ಮತ್ತು ರಾಜ್ಯಗಳ ವೋಟಿಂಗ್ ನಡೆಯುತ್ತಿತ್ತು. ಆದ್ರೆ 2004ರ ಲೋಕಸಭಾ ಚುಣಾವಣೆಯಲ್ಲಿ(Lok Sabha elections 2024) ಸಂಪೂರ್ಣ ಬ್ಯಾಲೆಟ್ ಪೇಪರ್ ಬ್ಯಾನ್ ಮಾಡಲಾಯ್ತು. ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮಷಿನ್ ಮುಖೇನ ವೋಟಿಂಗ್ ಪದ್ಧತಿ ದೇಶದಲ್ಲಿ ಜಾರಿಗೆ ಬಂತು. ದೇಶದಲ್ಲಿ ಇವಿಎಂ ಮಷಿನ್ ಪರಿಚಯವಾಗಿ 20 ವರ್ಷಗಳೇ ಕಳೆದಿವೆ. ಈ 20 ವರ್ಷಗಳಲ್ಲಿ ಹಲವು ಚುಣಾವಣೆಗಳು ನಡೆದಿವೆ. ಆದರು ಸಹ ಈಗಲೂ ಕೆಲವೊಂದಿಷ್ಟು ರಾಜಕೀಯ ಪಕ್ಷಗಳಿಗೆ ಇವಿಎಂ ಮಷಿನ್ ಮೇಲೆ ನಂಬಿಕೆ ಬಂದಂತಿಲ್ಲ. ತಮ್ಮ ಪಕ್ಷಕ್ಕೆ ಗೆಲುವು ಸಿಕ್ಕ ಸಂದರ್ಭದಲ್ಲಿ ಬಾಯಿ ಮುಚ್ಕೊಂಡು ಇರ್ತಾರೆ. ಸೋಲಾಗುತ್ತಿದ್ದಂತೆ ಸೋಲಿನ ಆರೋಪವನ್ನು ಇವಿಎಂ ಮಷಿನ್ ಮೇಲೆ ಹಾಕ್ತಾರೆ. ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಅಸೋಷಿಯೇಷನ್ ಫಾರ್  ಡೆಮಾಕ್ರಾಟಿಕ್  ರಿಫಾರ್ಮ್ಸ್ ಎಂಬ ಸಂಸ್ಥೆಯು ಇವಿಎಂ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತಮ್ಮ ಸಂಸ್ಥೆಗೆ ಇವಿಎಂ ಮಷಿನ್ ಕೌಂಟ್ ಮಾಡುವ ವೋಟ್ಗಳ ಬಗ್ಗೆ ಅನುಮಾನವಿದೆ. ಹೀಗಾಗಿ ಮುಂದೆ ಬರುವ ಎಲ್ಲ ಚುನಾವಣೆಗಳಲ್ಲೂ ಇವಿಎಂ ಮಷಿನ್ ವೋಟ್ ಕೌಂಟ್ಗಳ ಜೊತೆಗೆ ವಿವಿ ಪ್ಯಾಟ್ನ ಚೀಟಿಗಳನ್ನು ಲೆಕ್ಕ ಹಾಕಬೇಬೇಕು ಎಂಬ ಅರ್ಜಿಯನ್ನು ಹಾಕಿತ್ತು ಈ ಸಂಸ್ಥೆ.

ಇದನ್ನೂ ವೀಕ್ಷಿಸಿ:  Siddaramaiah: ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲು ನೀಡಿರುವುದು ನೂರಕ್ಕೆ ನೂರು ಸುಳ್ಳು: ಸಿಎಂ ಸಿದ್ದರಾಮಯ್ಯ

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more