Supreme court on EVM: ಇವಿಎಂ ಬಂದು 20 ವರ್ಷಗಳಾದ್ರು ಅನುಮಾನವೇಕೆ? ಕೆಲ ಪಕ್ಷಗಳು ಸೋತಾಗ ಇದರ ಮೇಲೆ ಸಂದೇಹವೇಕೆ..?

Supreme court on EVM: ಇವಿಎಂ ಬಂದು 20 ವರ್ಷಗಳಾದ್ರು ಅನುಮಾನವೇಕೆ? ಕೆಲ ಪಕ್ಷಗಳು ಸೋತಾಗ ಇದರ ಮೇಲೆ ಸಂದೇಹವೇಕೆ..?

Published : Apr 27, 2024, 05:26 PM IST

ಇವಿಎಂ ಅನುಮಾನಿಸಿ ಅರ್ಜಿ ಹಾಕಿದವರಿಗೆ ಬುದ್ದಿ ಹೇಳಿದ ಸುಪ್ರೀಂ
ಇವಿಎಂ ಬೇಡ..ಬ್ಯಾಲೆಟ್ ಪೇಪರ್ ಬೇಕು ಅಂದವರಿಗೆ ಸುಪ್ರೀಂ ಚಾಟಿ
ಕೇವಲ ಅನುಮಾನ ಪಟ್ಟರೆ ಕೋರ್ಟ್ ಒಪ್ಪುವುದಿಲ್ಲವೆಂದ ಸುಪ್ರೀಂ
ಚುನಾವಣಾ ಆಯೋಗಕ್ಕೆ ಎರಡು ಸಲಹೆ ಕೊಟ್ಟ ಸುಪ್ರೀಂ ಕೋರ್ಟ್


ಇವಿಎಂ ಮಷಿನ್ ಜೊತೆ ಜೊತೆಗೆ ವಿವಿ ಪ್ಯಾಟ್‌ನ ಚೀಟಿಗಳನ್ನೂ ಲೆಕ್ಕ ಹಾಕಬೇಕೆಂದು ಸುಪ್ರೀಂ ಕೋರ್ಟ್(Supreme Court) ಮೊರೆ ಹೋಗಲಾಗಿತ್ತು. ಹಾಗೆನೇ ಎಲೆಕ್ಷನ್ ವೋಟಿಂಗ್ ಸಂದರ್ಭದಲ್ಲಿ ಇವಿಎಂ ಮಷಿನ್(EVM machine) ಬದಲಾಗಿ, ಹಳೇ ಪದ್ಧತಿಯಾದ ಬ್ಯಾಲೆಟ್ ಪೇಪರ್(Ballot Paper) ವೋಟಿಂಗ್ ಅನ್ನೇ ಮರಳಿ ತರಬೇಕು ಅನ್ನೋ ಅರ್ಜಿ ಸಹ ಸುಪ್ರೀಂ ಕೋರ್ಟ್‌ನಲ್ಲಿತ್ತು. ನಿನ್ನೆ ಆ ಎಲ್ಲ ಅರ್ಜಿಗಳಿಗೆ ಸುಪ್ರೀಂ ಕೋರ್ಟ್ ಖಡಕ್ ಜವಾಬ್ ಕೊಟ್ಟಿದೆ. ದೇಶದಲ್ಲಿ ಮೊದಲ್ಲೆಲ್ಲ ಬ್ಯಾಲೆಟ್ ಪೇಪರ್ ಮೇಲೆ ದೇಶ ಮತ್ತು ರಾಜ್ಯಗಳ ವೋಟಿಂಗ್ ನಡೆಯುತ್ತಿತ್ತು. ಆದ್ರೆ 2004ರ ಲೋಕಸಭಾ ಚುಣಾವಣೆಯಲ್ಲಿ(Lok Sabha elections 2024) ಸಂಪೂರ್ಣ ಬ್ಯಾಲೆಟ್ ಪೇಪರ್ ಬ್ಯಾನ್ ಮಾಡಲಾಯ್ತು. ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮಷಿನ್ ಮುಖೇನ ವೋಟಿಂಗ್ ಪದ್ಧತಿ ದೇಶದಲ್ಲಿ ಜಾರಿಗೆ ಬಂತು. ದೇಶದಲ್ಲಿ ಇವಿಎಂ ಮಷಿನ್ ಪರಿಚಯವಾಗಿ 20 ವರ್ಷಗಳೇ ಕಳೆದಿವೆ. ಈ 20 ವರ್ಷಗಳಲ್ಲಿ ಹಲವು ಚುಣಾವಣೆಗಳು ನಡೆದಿವೆ. ಆದರು ಸಹ ಈಗಲೂ ಕೆಲವೊಂದಿಷ್ಟು ರಾಜಕೀಯ ಪಕ್ಷಗಳಿಗೆ ಇವಿಎಂ ಮಷಿನ್ ಮೇಲೆ ನಂಬಿಕೆ ಬಂದಂತಿಲ್ಲ. ತಮ್ಮ ಪಕ್ಷಕ್ಕೆ ಗೆಲುವು ಸಿಕ್ಕ ಸಂದರ್ಭದಲ್ಲಿ ಬಾಯಿ ಮುಚ್ಕೊಂಡು ಇರ್ತಾರೆ. ಸೋಲಾಗುತ್ತಿದ್ದಂತೆ ಸೋಲಿನ ಆರೋಪವನ್ನು ಇವಿಎಂ ಮಷಿನ್ ಮೇಲೆ ಹಾಕ್ತಾರೆ. ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಅಸೋಷಿಯೇಷನ್ ಫಾರ್  ಡೆಮಾಕ್ರಾಟಿಕ್  ರಿಫಾರ್ಮ್ಸ್ ಎಂಬ ಸಂಸ್ಥೆಯು ಇವಿಎಂ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತಮ್ಮ ಸಂಸ್ಥೆಗೆ ಇವಿಎಂ ಮಷಿನ್ ಕೌಂಟ್ ಮಾಡುವ ವೋಟ್ಗಳ ಬಗ್ಗೆ ಅನುಮಾನವಿದೆ. ಹೀಗಾಗಿ ಮುಂದೆ ಬರುವ ಎಲ್ಲ ಚುನಾವಣೆಗಳಲ್ಲೂ ಇವಿಎಂ ಮಷಿನ್ ವೋಟ್ ಕೌಂಟ್ಗಳ ಜೊತೆಗೆ ವಿವಿ ಪ್ಯಾಟ್ನ ಚೀಟಿಗಳನ್ನು ಲೆಕ್ಕ ಹಾಕಬೇಬೇಕು ಎಂಬ ಅರ್ಜಿಯನ್ನು ಹಾಕಿತ್ತು ಈ ಸಂಸ್ಥೆ.

ಇದನ್ನೂ ವೀಕ್ಷಿಸಿ:  Siddaramaiah: ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲು ನೀಡಿರುವುದು ನೂರಕ್ಕೆ ನೂರು ಸುಳ್ಳು: ಸಿಎಂ ಸಿದ್ದರಾಮಯ್ಯ

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more