ಡಿ. 13, 2001ರಂದು ಸಂಸತ್ ಮೇಲೆರಗಿದ್ದರು ಐವರು ಉಗ್ರರು..! ಅದೇ ದಿನ ಮತ್ತೆ ನಡುಗಿತು ಲೋಕಸಭೆ..!

ಡಿ. 13, 2001ರಂದು ಸಂಸತ್ ಮೇಲೆರಗಿದ್ದರು ಐವರು ಉಗ್ರರು..! ಅದೇ ದಿನ ಮತ್ತೆ ನಡುಗಿತು ಲೋಕಸಭೆ..!

Published : Dec 14, 2023, 03:44 PM IST

ಲೋಕಸಭೆ ಇತಿಹಾಸದಲ್ಲೇ ಕಂಡು ಕೇಳರಿಯದ ಭದ್ರತಾ ವೈಫಲ್ಯ..!
22 ವರ್ಷಗಳ ಹಿಂದಿನ ಕರಾಳ ಘಟನೆ,ಅದೇ ದಿನ ಮಹಾ ಪ್ರಮಾದ..!
ಸಂಸತ್ ಒಳಗೆ ನುಗ್ಗಿದ ಅಪರಿಚಿತರು ಯಾರು?ಏನು ಅವರ ಟಾರ್ಗೆಟ್ ?

22 ವರ್ಷಗಳ ನಂತರ ಇಡೀ ದೇಶ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. 2 ದಶಕಗಳ ಹಿಂದಿನ ಆ ಕರಾಳ ಘಟನೆಯನ್ನು ಮತ್ತೆ ನೆನಪಿಸಿತು, ಅದೊಂದು ಪ್ರಮಾದ. ಹೊಸ ಸಂಸತ್(Parlimrnt) ಭವನಕ್ಕೇ ನುಗ್ಗಿದರು ಇಬ್ಬರು ಆಗಂತುಕರು. ಲೋಕಸಭೆಯಲ್ಲೇ(Loksabha) ಸ್ಮೋಕ್ ಬಾಂಬ್ ಸಿಡಿಸಿದ್ರು ಅವಳಿ ಅಪರಿಚಿತರು. ಅವತ್ತು ನಡೆದದ್ದು ಮಾರಣಹೋಮ, ಇವತ್ತು ನಡೆದಿರೋದು ಮಹಾಪ್ರಮಾದ. ಸಂಸತ್ ಭವನ ಈ ದೇಶದ ಆಡಳಿತದ ಶಕ್ತಿಕೇಂದ್ರ. ದೇಶಕ್ಕೆ ಏನೇ ಕಾನೂನು ಬಂದ್ರೂ, ವ್ಯವಸ್ಥಗಳು ಬಂದ್ರೂ ಅವೆಲ್ಲದ ಮೂಲ ಸ್ಥಾನ ಅದೇ. ಸಂಸತ್ ಅಂದ್ರೆ ದೇಶದ ಹೆಮ್ಮೆ, ಸಂಸತ್ ಅಂದ್ರೆ ದೇಶದ ಘನತೆ, ಗೌರವ. ಪ್ರಜಾತಂತ್ರ ವ್ಯವಸ್ಥೆಯ ಪ್ರತೀಕ ಈ ಸಂಸತ್. ಅಂಥಾ ಸಂಸತ್'ನೊಳಗೆ ಬುಧವಾರ ನಡೆದದ್ದು ನಿಜಕ್ಕೂ ಇಡೀ ದೇಶವೇ ಬೆಚ್ಚಿ ಬೀಳುವಂಥಾ ಘಟನೆ. ಡಿಸೆಂಬರ್ 13 ಈ ದಿನವನ್ನು ನೆನಪಿಸಿಕೊಂಡ್ರ ಭಾರತದ ಸಂಸತ್ ಒಂದು ಕ್ಷಣ ಬೆಚ್ಚಿ ಬೀಳತ್ತೆ. ಕಾರಣವೂ ಇದೆ. ಅದು ಸಂಸತ್ ಪಾಲಿಗೆ ಕರಾಳ ದಿನ. 22 ವರ್ಷಗಳ ಹಿಂದೆ ಅದೇ ಡಿಸೆಂಬರ್ 13ರ ದಿನ ನಡೆದಿದ್ದ ಘಟನೆಯನ್ನ ದೇಶ ಇನ್ನೂ ಮರೆತಿಲ್ಲ, ಮರೆಯೋದಕ್ಕೆ ಸಾಧ್ಯಾನೂ ಇಲ್ಲ. ಯಾಕಂದ್ರೆ ಆ ಘಟನೆಯೇ ಅಂಥದ್ದು. ಆ ಘಟನೆಗೆ ದಿನಕ್ಕೆ 22 ವರ್ಷ ತುಂಬಿದ ದಿನದಂದೇ ಮತ್ತೊಂದು ಮಹಾಪ್ರಮಾದ ನಡೆದು ಹೋಗಿದೆ.

ಭಾರತದ ಸಂಸತ್ ಅಂದ್ರೆ ಅದೊಂದು ಸರ್ಪಕೋಟೆ. ಅದ್ರಲ್ಲೂ ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ಸೆಂಟ್ರಲ್ ವಿಸ್ತಾ(Central Vista) ಹೆಸರಿನ ಹೊಸ ಸಂಸತ್ ಭವನವಂತೂ ಅಭೇದ್ಯ ಕೋಟೆ. ಅಲ್ಲಿಗೆ ಸಂಸತ್ ಸದಸ್ಯರು, ಅಧಿಕಾರಿಗಳು, ಮಾಧ್ಯಮದವರು ಬಿಟ್ರೆ, ಬೇರಾರಿಗೂ ಪ್ರವೇಶವೇ ಇಲ್ಲ. ಸಂಸತ್ ಕಲಾಪವನ್ನು ವೀಕ್ಷಿಸಲು ಬರುವವರಿಗೆ ಪಾಸ್ ಇದ್ರೆ ಮಾತ್ರ ಎಂಟ್ರಿ. ಹಾಗೆ ಪಾಸ್ ಇದ್ದವರು ಐದಾರೂ ಭದ್ರತಾ ತಪಾಸಣೆಗಳನ್ನು ಮುಗಿಸಿಯೇ ಒಳಗೆ ಹೋಗ್ಬೇಕು. ಅನುಮತಿ ಇಲ್ಲದೆ ಒಂದು ಸಣ್ಣ ಇರುವೆಯೂ ಒಳ ಹೋಗಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗಿನ ಸರ್ಪಕೋಟೆಯಂಥಾ ಭದ್ರತೆ. ಆದ್ರೆ ಆ ಭದ್ರಕೋಟೆಯನ್ನೇ ವಂಚಿಸಿದ ಇಬ್ಬರು ಅಪರಿಚಿತರು, ಬುಧವಾರ ಲೋಕಸಭೆ ಕಲಾಪ ನಡೆಯುತ್ತಿದ್ದ ಸಂಸತ್ ಭವನಕ್ಕೇ ನುಗ್ಗಿ ಬಿಟ್ರು.

ಇದನ್ನೂ ವೀಕ್ಷಿಸಿ:  ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more