ಡಿ. 13, 2001ರಂದು ಸಂಸತ್ ಮೇಲೆರಗಿದ್ದರು ಐವರು ಉಗ್ರರು..! ಅದೇ ದಿನ ಮತ್ತೆ ನಡುಗಿತು ಲೋಕಸಭೆ..!

ಡಿ. 13, 2001ರಂದು ಸಂಸತ್ ಮೇಲೆರಗಿದ್ದರು ಐವರು ಉಗ್ರರು..! ಅದೇ ದಿನ ಮತ್ತೆ ನಡುಗಿತು ಲೋಕಸಭೆ..!

Published : Dec 14, 2023, 03:44 PM IST

ಲೋಕಸಭೆ ಇತಿಹಾಸದಲ್ಲೇ ಕಂಡು ಕೇಳರಿಯದ ಭದ್ರತಾ ವೈಫಲ್ಯ..!
22 ವರ್ಷಗಳ ಹಿಂದಿನ ಕರಾಳ ಘಟನೆ,ಅದೇ ದಿನ ಮಹಾ ಪ್ರಮಾದ..!
ಸಂಸತ್ ಒಳಗೆ ನುಗ್ಗಿದ ಅಪರಿಚಿತರು ಯಾರು?ಏನು ಅವರ ಟಾರ್ಗೆಟ್ ?

22 ವರ್ಷಗಳ ನಂತರ ಇಡೀ ದೇಶ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. 2 ದಶಕಗಳ ಹಿಂದಿನ ಆ ಕರಾಳ ಘಟನೆಯನ್ನು ಮತ್ತೆ ನೆನಪಿಸಿತು, ಅದೊಂದು ಪ್ರಮಾದ. ಹೊಸ ಸಂಸತ್(Parlimrnt) ಭವನಕ್ಕೇ ನುಗ್ಗಿದರು ಇಬ್ಬರು ಆಗಂತುಕರು. ಲೋಕಸಭೆಯಲ್ಲೇ(Loksabha) ಸ್ಮೋಕ್ ಬಾಂಬ್ ಸಿಡಿಸಿದ್ರು ಅವಳಿ ಅಪರಿಚಿತರು. ಅವತ್ತು ನಡೆದದ್ದು ಮಾರಣಹೋಮ, ಇವತ್ತು ನಡೆದಿರೋದು ಮಹಾಪ್ರಮಾದ. ಸಂಸತ್ ಭವನ ಈ ದೇಶದ ಆಡಳಿತದ ಶಕ್ತಿಕೇಂದ್ರ. ದೇಶಕ್ಕೆ ಏನೇ ಕಾನೂನು ಬಂದ್ರೂ, ವ್ಯವಸ್ಥಗಳು ಬಂದ್ರೂ ಅವೆಲ್ಲದ ಮೂಲ ಸ್ಥಾನ ಅದೇ. ಸಂಸತ್ ಅಂದ್ರೆ ದೇಶದ ಹೆಮ್ಮೆ, ಸಂಸತ್ ಅಂದ್ರೆ ದೇಶದ ಘನತೆ, ಗೌರವ. ಪ್ರಜಾತಂತ್ರ ವ್ಯವಸ್ಥೆಯ ಪ್ರತೀಕ ಈ ಸಂಸತ್. ಅಂಥಾ ಸಂಸತ್'ನೊಳಗೆ ಬುಧವಾರ ನಡೆದದ್ದು ನಿಜಕ್ಕೂ ಇಡೀ ದೇಶವೇ ಬೆಚ್ಚಿ ಬೀಳುವಂಥಾ ಘಟನೆ. ಡಿಸೆಂಬರ್ 13 ಈ ದಿನವನ್ನು ನೆನಪಿಸಿಕೊಂಡ್ರ ಭಾರತದ ಸಂಸತ್ ಒಂದು ಕ್ಷಣ ಬೆಚ್ಚಿ ಬೀಳತ್ತೆ. ಕಾರಣವೂ ಇದೆ. ಅದು ಸಂಸತ್ ಪಾಲಿಗೆ ಕರಾಳ ದಿನ. 22 ವರ್ಷಗಳ ಹಿಂದೆ ಅದೇ ಡಿಸೆಂಬರ್ 13ರ ದಿನ ನಡೆದಿದ್ದ ಘಟನೆಯನ್ನ ದೇಶ ಇನ್ನೂ ಮರೆತಿಲ್ಲ, ಮರೆಯೋದಕ್ಕೆ ಸಾಧ್ಯಾನೂ ಇಲ್ಲ. ಯಾಕಂದ್ರೆ ಆ ಘಟನೆಯೇ ಅಂಥದ್ದು. ಆ ಘಟನೆಗೆ ದಿನಕ್ಕೆ 22 ವರ್ಷ ತುಂಬಿದ ದಿನದಂದೇ ಮತ್ತೊಂದು ಮಹಾಪ್ರಮಾದ ನಡೆದು ಹೋಗಿದೆ.

ಭಾರತದ ಸಂಸತ್ ಅಂದ್ರೆ ಅದೊಂದು ಸರ್ಪಕೋಟೆ. ಅದ್ರಲ್ಲೂ ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ಸೆಂಟ್ರಲ್ ವಿಸ್ತಾ(Central Vista) ಹೆಸರಿನ ಹೊಸ ಸಂಸತ್ ಭವನವಂತೂ ಅಭೇದ್ಯ ಕೋಟೆ. ಅಲ್ಲಿಗೆ ಸಂಸತ್ ಸದಸ್ಯರು, ಅಧಿಕಾರಿಗಳು, ಮಾಧ್ಯಮದವರು ಬಿಟ್ರೆ, ಬೇರಾರಿಗೂ ಪ್ರವೇಶವೇ ಇಲ್ಲ. ಸಂಸತ್ ಕಲಾಪವನ್ನು ವೀಕ್ಷಿಸಲು ಬರುವವರಿಗೆ ಪಾಸ್ ಇದ್ರೆ ಮಾತ್ರ ಎಂಟ್ರಿ. ಹಾಗೆ ಪಾಸ್ ಇದ್ದವರು ಐದಾರೂ ಭದ್ರತಾ ತಪಾಸಣೆಗಳನ್ನು ಮುಗಿಸಿಯೇ ಒಳಗೆ ಹೋಗ್ಬೇಕು. ಅನುಮತಿ ಇಲ್ಲದೆ ಒಂದು ಸಣ್ಣ ಇರುವೆಯೂ ಒಳ ಹೋಗಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗಿನ ಸರ್ಪಕೋಟೆಯಂಥಾ ಭದ್ರತೆ. ಆದ್ರೆ ಆ ಭದ್ರಕೋಟೆಯನ್ನೇ ವಂಚಿಸಿದ ಇಬ್ಬರು ಅಪರಿಚಿತರು, ಬುಧವಾರ ಲೋಕಸಭೆ ಕಲಾಪ ನಡೆಯುತ್ತಿದ್ದ ಸಂಸತ್ ಭವನಕ್ಕೇ ನುಗ್ಗಿ ಬಿಟ್ರು.

ಇದನ್ನೂ ವೀಕ್ಷಿಸಿ:  ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more