ಸರ್ಕಾರದ ದುಡ್ಡಲ್ಲಿ ಮಸೀದಿ ರೀತಿ ಬಸ್ ನಿಲ್ದಾಣ, ಮೈಸೂರಿನಲ್ಲಿ ಮತ್ತೊಂದು ಧರ್ಮದಂಗಲ್ !

Nov 14, 2022, 10:42 PM IST

ಮೈಸೂರಿನಲ್ಲಿ ಬಿಜೆಪಿ ಶಾಸಕ ರಾಮದಾಸ್ ಅವರ ಕ್ಷೇತ್ರದಲ್ಲಿ ಬಸ್ ನಿಲ್ದಾಣವನ್ನು ಮಸೀದಿ ಗುಂಬಜ್ ರೀತಿಯಲ್ಲಿ ನಿರ್ಮಿಸಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ದುಡ್ಡಲ್ಲಿ ಮಸೀದಿ ರೀತಿಯಲ್ಲಿ ಬಸ್ ನಿಲ್ದಾಣ ಮಾಡಿದ್ದು ಯಾಕೆ? ಸರ್ಕಾರ  ತಕ್ಷಣವೇ ಇದನ್ನು ಒಡೆದು ಹಾಕಬೇಕು. ಇಲ್ಲದಿದ್ದರೆ ನಾನೇ ಜೆಸಿಬಿ ಕರೆಸಿ ಒಡೆದು ಹಾಕುತ್ತೇನೆ ಎಂದು ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ. ಈ ಬಸ್ ನಿಲ್ದಾಣವನ್ನು ಎಂಜಿನೀಯರ್ ತಬ್ರೈಸ್ ಕಟ್ಟಿಸಿದ್ದಾರೆ. ಇದರ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.