ಭರ್ತಿಯಾಗುತ್ತಿದೆ ಆಸ್ಪತ್ರೆ, ಬೆಡ್, ಆ್ಯಂಬುಲೆನ್ಸ್ ಸಿಗುತ್ತಿಲ್ಲ; ಕರ್ನಾಟಕದಲ್ಲಿ ಕೊರೋನಾ ಅಪಾಯ!

Apr 13, 2021, 11:29 PM IST

ಬೆಂಗಳೂರು(ಏ.13): ಕರ್ನಾಟಕದಲ್ಲಿ ಕೊರೋನಾ ವೈರಸ್ ಅಪಾಯ ಮಟ್ಟ ಮೀರುತ್ತಿದೆ. ಇದೀಗ ಸರ್ಕಾರ ಲಾಕ್‌ಡೌನ್ ಬಿಟ್ಟು ಇತರ ಸಲಹೆ ನೀಡುವಂತೆ ತಾಂತ್ರಿಕ ಸಮಿತಿಯನ್ನು ಕೋರಿದೆ. ಇತ್ತ ಬೆಂಗಳೂರಿನಲ್ಲಿ ಆಸ್ಪತ್ರೆಗಳು ಭರ್ತಿಯಾಗುತ್ತಿದೆ. ಪರಿಸ್ಥಿತಿ ಕೈಮೀರುತ್ತಿದೆ. ಮಾಜಿ ಶಾಸಕರ ತಂಗಿಯನ್ನೇ ಆಸ್ಪತ್ರೆ ಸಿಬ್ಬಂದಿಗಳು ಹೊರಹಾಕಿದ ಘಟನೆ ನಡೆದಿದೆ.  ಇದರ ನಡುವೆ ಕರ್ನಾಟಕದಲ್ಲಿ ಪ್ರತಿದಿನ 45 ಸಾವಿರ ಕೇಸ್ ದಾಖಲಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೋನಾ ಅಟ್ಟಹಾಸ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ.