ದಂಗೆ ಎಬ್ಬಿಸಿ ಸುಳ್ಳು ಹೇಳಿದ ರೈತರು; ಅಸಲಿ ವಿಡಿಯೋ ಬಹಿರಂಗ ಪಡಿಸಿದ ದೆಹಲಿ ಪೊಲೀಸ್!

Jan 26, 2021, 10:20 PM IST

ದೆಹಲಿಯಲ್ಲಿ ರೈತರು ಅಡ್ಡಾದಿಡ್ಡಿ ಟ್ರಾಕ್ಟರ್ ರ್ಯಾಲಿ ನಡೆಸಿ ದಂಗೆ ಎಬ್ಬಿಸಿದ್ದಾರೆ. ಈ ದಂಗೆಯಿಂದ 100ಕ್ಕೂ ಹೆಚ್ಚಿನ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಟ್ರಾಕ್ಟರ್ ಸಮೇತ ಬ್ಯಾರಿಕೇಡ್ ದಾಟಿ ಬರುವ ಪ್ರಯತ್ನದಲ್ಲಿದ್ದ ರೈತ, ಟ್ರಾಕ್ಟರ್ ಮಗುಚಿ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ರೈತರು ಪೊಲೀಸರ ಫೈರ್ ಮಾಡಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ಶವ ಮುಂದಿಟ್ಟು ಪ್ರತಿಭಟನೆ ಮಾಡಿದ್ದರು. ರೈತ ಸಾವಿಗೆ ಅಸಲಿ ಕಾರಣವೇನು ಅನ್ನೋದನ್ನು ದೆಹಲಿ ಪೊಲೀಸರು ವಿಡಿಯೋ ಸಹಿತ ಬಹಿರಂಗ ಪಡಿಸಿದ್ದಾರೆ.