ನಿಸರ್ಗ'ದ ಅಬ್ಬರಕ್ಕೆ ನಲುಗಿದ ಮುಂಬೈ ಕರಾವಳಿ; ಮಳೆ ಹೊಡೆತಕ್ಕೆ ಧರೆಗಿಳಿದ ಮರಗಳು

Jun 3, 2020, 4:38 PM IST

ಕೊರೊನಾದಿಂದ ನಲುಗಿದ ಮಹಾರಾಷ್ಟ್ರಕ್ಕೆ 'ನಿಸರ್ಗ' ಚಂಡಮಾರುತ ಇನ್ನೊಂದು ಆಘಾತ ನೀಡಿದೆ. 138 ವರ್ಷದ ಬಳಿಕ ಮಹಾರಾಷ್ಟ್ರಕ್ಕೆ ಚಂಡಮಾರುತ ಅಪ್ಪಳಿಸಿದೆ. ರತ್ನಗಿರಿ, ಕೊಂಕಣ್ ಭಾಗದಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಸೈಕ್ಲೋನ್ ಅಪ್ಪಳಿಸಿದೆ. ಸೈಕ್ಲೋನ್ ಹೊಡೆತಕ್ಕೆ ಅಲಿಭಾಗ್, ಮುಂಬೈ ಕರಾವಳಿಯಲ್ಲಿ ಕೋಲಾಹಲ ಎದ್ದಿದೆ. ಭಾರೀ ಬಿರುಗಾಳಿ, ಮಳೆಯ ಹೊಡೆತಕ್ಕೆ ಮರಗಳು ಧರೆಗುರುಳಿವೆ.