ವಾರಣಾಸಿಯಲ್ಲಿ ಸಿದ್ಧವಾಗಲಿದೆ ಕ್ರಿಕೆಟ್ ಕಾಶಿ! ತ್ರಿಶೂಲದಂತೆ ಫ್ಲಡ್ಲೈಟ್, ಢಮರುಗದಂತೆ ಪ್ರವೇಶ ದ್ವಾರ!

ವಾರಣಾಸಿಯಲ್ಲಿ ಸಿದ್ಧವಾಗಲಿದೆ ಕ್ರಿಕೆಟ್ ಕಾಶಿ! ತ್ರಿಶೂಲದಂತೆ ಫ್ಲಡ್ಲೈಟ್, ಢಮರುಗದಂತೆ ಪ್ರವೇಶ ದ್ವಾರ!

Published : Sep 22, 2023, 12:57 PM IST

ಕ್ರಿಕೆಟ್ ಕಾಶಿ ಅಂದ್ರೆ ಥಟ್ಟನೇ ನೆನಪಾಗೋದು ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣ. ಇದೀಗ ಭಾರತದಲ್ಲೇ ‘ಕ್ರಿಕೆಟ್ ಕಾಶಿ’ ನಿರ್ಮಾಣವಾಗುತ್ತಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ರೆಡಿಯಾಗಿದೆ. ಶಿವನಗರದಲ್ಲಿ ನಿರ್ಮಾಣವಾಗಲಿರುವ ಈ ಸ್ಟೇಡಿಯಂನ ವಿಶೇಷತೆ ಏನಂದ್ರೆ, ಭಗವಾನ್ ಶಿವನ ಪ್ರೇರಿತ ಥೀಮ್ನಿಂದ ಕೂಡಿದೆ.
 

ಶಿವನ ತಲೆ ಮೇಲಿರುವ ಅರ್ಧಚಂದ್ರಾಕೃತಿಯಂತೆ ಮೇಲ್ಛಾವಣೆ ನಿರ್ಮಿಸಲಾಗಿದೆ. ಫ್ಲಡ್ಲೈಟ್ಗಳನ್ನ ದೊಡ್ಡ ತ್ರಿಶೂಲದ ಆಕೃತಿಯ ಕಂಬಗಳಲ್ಲಿ ಅಳವಡಿಸಲಾಗಿದೆ. ಪೆವಿಲಿಯನ್ ಮತ್ತು ವಿಐಪಿ ಲಾಂಜ್ಗಳ ಗುಮ್ಮಟವು ಢಮರುಗ ರೀತಿ ಮಾಡಲಾಗಿದೆ. ಇನ್ನು ಗ್ಯಾಲರಿಯ ಆಸನ ವ್ಯವಸ್ಥೆಯನ್ನು ಕಾಶಿ ಘಾಟ್ಗಳ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಸ್ಟೇಡಿಯಂನ ಗೇಟುಗಳು ಬಿಲ್ವ ಪತ್ರೆಯ ರೀತಿಯಲ್ಲಿವೆ. ಇನ್ನು ಈ ಕ್ರೀಡಾಂಗಣ 32 ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ. ಹೊಸ ಸ್ಟೇಡಿಯಂ 400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಮಾರು 40 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಈ ಸ್ಟೇಡಿಯಂಗೆ ಇದೆ. ಪ್ರಧಾನಿ ಮೋದಿ(Narendra Modi) ನಾಡಿದ್ದು ಕ್ರೀಡಾಂಗಣದ ಶಿಲಾನ್ಯಾಸ ಮಾಡಲಿದ್ದಾರೆ. ಇದು ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರಾಣಸಿ(Varanasi) ಸಮೀಪದ ಈ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಷಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ದಿಗ್ಗಜರಾದ ಕಪಿಲ್ ದೇವ್, ಸುನೀಲ್ ಗಾವಸ್ಕರ್, ಸಚಿನ್ ತೆಂಡುಲ್ಕರ್, ಸಮಾರಂಭದಲ್ಲಿ ಹಾಜರಿರಲಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಇತರ ಸದಸ್ಯರಾದ ದಿಲೀಪ್ ವೆಂಗ್ಸರ್ಕಾರ್, ರವಿಶಾಸ್ತ್ರಿ, ಮದನ್ ಲಾಲ್ ಜತೆಗೆ ಕನ್ನಡಿಗ ಜಿಆರ್ ವಿಶ್ವನಾಥ್ ಕೂಡ ಉಪಸ್ಥಿತರಿರಲಿದ್ದಾರೆ. 

ಇದನ್ನೂ ವೀಕ್ಷಿಸಿ:  150 ರೂ. ಇದ್ದ ಟೊಮೆಟೋ ಬೆಲೆ 20 ರೂಪಾಯಿಗೆ ಕುಸಿತ: ಅನ್ನದಾತ ಕಂಗಾಲು

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more