I.N.D.I.A Alliance: ಬಿಹಾರದಲ್ಲಿ ನಿತೀಶ್ ಸಿಟ್ಟು.. ಪಂಜಾಬ್‌, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೋಧ..!

I.N.D.I.A Alliance: ಬಿಹಾರದಲ್ಲಿ ನಿತೀಶ್ ಸಿಟ್ಟು.. ಪಂಜಾಬ್‌, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೋಧ..!

Published : Jan 25, 2024, 04:32 PM IST

I.N.D.I.A ಮಹಾ ಮೈತ್ರಿಕೂಟಕ್ಕೆ ಬಂಗಾಳದ ದೀದಿ ಚೆಕ್‌ಬಂದಿ..!
ಕಾಂಗ್ರೆಸ್ ವಿರುದ್ಧ ಮಿತ್ರರ ಬಂಡಾಯ.. ಘಟಬಂಧನ್ ಛಿದ್ರ ಛಿದ್ರ..?
I.N.D.I.A ಮೈತ್ರಿಕೂಟದಲ್ಲಿ ಭಿನ್ನಮತದ ಬಿರುಗಾಳಿ ಬೀಸಿದ್ದೇಕೆ..?

ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಿ, ಹಿಂದೂ ಸಮುದಾಯದ 500 ವರ್ಷಗಳ ಕನಸನ್ನು ನನಸಾಗಿಸಿ, ರಾಮಭಕ್ತರ ತಪಸ್ಸನ್ನು ಈಡೇರಿಸಿ, ರಾಮಾಸ್ತ್ರ ಹಿಡಿದು ಮಹಾಭಾರತ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದಾರೆ ಪ್ರಧಾನಿ ನರೇಂದ್ರ ಮೋದಿ(Narendra modi). ಸಿಂಗಲ್ ಸಿಂಹ ಮೋದಿ ಬೇಟೆಗೆ ಹೊಂಚು ಹಾಕಿ ಕೂತಿದೆ 27 ಸೈನ್ಯಗಳ ಮಹಾಘಟಬಂಧನ್ ಮೈತ್ರಿಕೂಟ(Alliance). ಸಿಂಹವನ್ನು ಸಿಂಗಲ್ಲಾಗಿ ಬೇಟೆಯಾಡೋದು ಕಷ್ಟ ಅನ್ನೋ ಕಟು ಸತ್ಯವನ್ನು ಅರಿತಿರೋ ವಿರೋಧ ಪಕ್ಷಗಳು, ಮಹಾ ಮೈತ್ರಿಕೂಟವೊಂದನ್ನು ರಚಿಸಿ, ಅದಕ್ಕೆ ಇಂಡಿಯಾ ಅನ್ನೋ ಹೆಸರಿಟ್ಟು ರಣರಂಗಕ್ಕೆ ಧುಮುಕಿರೋದು ಹಳೇ ಸುದ್ದಿ. ಮೋದಿ ಅನ್ನೋ ಮದ್ದಾನೆಯನ್ನು ಕಟ್ಟಿ ಹಾಕಲು ಅಂಥದ್ದೇ ಬಲವನ್ನು ಒಗ್ಗೂಡಿಸಿ, ಆ ಬಲಕ್ಕೆ ಇಂಡಿಯಾ ಮೈತ್ರಿಕೂಟ ಅನ್ನೋ ಹೆಸರಿಡಲಾಗಿತ್ತು. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣದ ನಾಯಕರೆಲ್ಲಾ ಇಂಡಿಯಾ ಘಟಬಂಧನ್ ಜೊತೆ ಕೈ ಜೋಡಿಸಿದ್ದರು. ಕಾಂಗ್ರೆಸ್(COngress) ಪಕ್ಷದ ಜೊತೆ ಬಂಗಾಳದ ಮಮತಾ ಬ್ಯಾನರ್ಜಿ(Mamata Banerjee), ಬಿಹಾರದ ನಿತೀಶ್ ಕುಮಾರ್, ದೆಹಲಿಯ ಅರವಿಂದ್ ಕೇಜ್ರಿವಾಲ್, ಮಹಾರಾಷ್ಟ್ರದ ಶರದ್ ಪವಾರ್, ತಮಿಳುನಾಡಿನ ಎಂ.ಕೆ ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್.. ಮಹಾಘಟ ಬಂಧನ್ ಜೊತೆ ಹೆಜ್ಜೆ ಹಾಕಿದವರು ಒಬ್ಬರಿಗಿಂತ ಒಬ್ರು ಘಟಾನುಘಟಿಗಳೇ. ಎಲ್ಲರೂ ಒಂದಾಗಿ ಮೋದಿ ವಿರುದ್ಧ ರಣಕಹಳೆ ಮೊಳಗಿಸಿ ಬಿಟ್ಟಿದ್ರು.

ಇದನ್ನೂ ವೀಕ್ಷಿಸಿ:  1000 ವರ್ಷಗಳ ಬಳಿಕವೂ ಜನವರಿ 22,2024ನ್ನು ಎಲ್ಲರೂ ನೆನಪಿಸುತ್ತಾರೆ: ಪ್ರಧಾನಿ ಮೋದಿ

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more