I.N.D.I.A Alliance: ಬಿಹಾರದಲ್ಲಿ ನಿತೀಶ್ ಸಿಟ್ಟು.. ಪಂಜಾಬ್‌, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೋಧ..!

I.N.D.I.A Alliance: ಬಿಹಾರದಲ್ಲಿ ನಿತೀಶ್ ಸಿಟ್ಟು.. ಪಂಜಾಬ್‌, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೋಧ..!

Published : Jan 25, 2024, 04:32 PM IST

I.N.D.I.A ಮಹಾ ಮೈತ್ರಿಕೂಟಕ್ಕೆ ಬಂಗಾಳದ ದೀದಿ ಚೆಕ್‌ಬಂದಿ..!
ಕಾಂಗ್ರೆಸ್ ವಿರುದ್ಧ ಮಿತ್ರರ ಬಂಡಾಯ.. ಘಟಬಂಧನ್ ಛಿದ್ರ ಛಿದ್ರ..?
I.N.D.I.A ಮೈತ್ರಿಕೂಟದಲ್ಲಿ ಭಿನ್ನಮತದ ಬಿರುಗಾಳಿ ಬೀಸಿದ್ದೇಕೆ..?

ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಿ, ಹಿಂದೂ ಸಮುದಾಯದ 500 ವರ್ಷಗಳ ಕನಸನ್ನು ನನಸಾಗಿಸಿ, ರಾಮಭಕ್ತರ ತಪಸ್ಸನ್ನು ಈಡೇರಿಸಿ, ರಾಮಾಸ್ತ್ರ ಹಿಡಿದು ಮಹಾಭಾರತ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದಾರೆ ಪ್ರಧಾನಿ ನರೇಂದ್ರ ಮೋದಿ(Narendra modi). ಸಿಂಗಲ್ ಸಿಂಹ ಮೋದಿ ಬೇಟೆಗೆ ಹೊಂಚು ಹಾಕಿ ಕೂತಿದೆ 27 ಸೈನ್ಯಗಳ ಮಹಾಘಟಬಂಧನ್ ಮೈತ್ರಿಕೂಟ(Alliance). ಸಿಂಹವನ್ನು ಸಿಂಗಲ್ಲಾಗಿ ಬೇಟೆಯಾಡೋದು ಕಷ್ಟ ಅನ್ನೋ ಕಟು ಸತ್ಯವನ್ನು ಅರಿತಿರೋ ವಿರೋಧ ಪಕ್ಷಗಳು, ಮಹಾ ಮೈತ್ರಿಕೂಟವೊಂದನ್ನು ರಚಿಸಿ, ಅದಕ್ಕೆ ಇಂಡಿಯಾ ಅನ್ನೋ ಹೆಸರಿಟ್ಟು ರಣರಂಗಕ್ಕೆ ಧುಮುಕಿರೋದು ಹಳೇ ಸುದ್ದಿ. ಮೋದಿ ಅನ್ನೋ ಮದ್ದಾನೆಯನ್ನು ಕಟ್ಟಿ ಹಾಕಲು ಅಂಥದ್ದೇ ಬಲವನ್ನು ಒಗ್ಗೂಡಿಸಿ, ಆ ಬಲಕ್ಕೆ ಇಂಡಿಯಾ ಮೈತ್ರಿಕೂಟ ಅನ್ನೋ ಹೆಸರಿಡಲಾಗಿತ್ತು. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣದ ನಾಯಕರೆಲ್ಲಾ ಇಂಡಿಯಾ ಘಟಬಂಧನ್ ಜೊತೆ ಕೈ ಜೋಡಿಸಿದ್ದರು. ಕಾಂಗ್ರೆಸ್(COngress) ಪಕ್ಷದ ಜೊತೆ ಬಂಗಾಳದ ಮಮತಾ ಬ್ಯಾನರ್ಜಿ(Mamata Banerjee), ಬಿಹಾರದ ನಿತೀಶ್ ಕುಮಾರ್, ದೆಹಲಿಯ ಅರವಿಂದ್ ಕೇಜ್ರಿವಾಲ್, ಮಹಾರಾಷ್ಟ್ರದ ಶರದ್ ಪವಾರ್, ತಮಿಳುನಾಡಿನ ಎಂ.ಕೆ ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್.. ಮಹಾಘಟ ಬಂಧನ್ ಜೊತೆ ಹೆಜ್ಜೆ ಹಾಕಿದವರು ಒಬ್ಬರಿಗಿಂತ ಒಬ್ರು ಘಟಾನುಘಟಿಗಳೇ. ಎಲ್ಲರೂ ಒಂದಾಗಿ ಮೋದಿ ವಿರುದ್ಧ ರಣಕಹಳೆ ಮೊಳಗಿಸಿ ಬಿಟ್ಟಿದ್ರು.

ಇದನ್ನೂ ವೀಕ್ಷಿಸಿ:  1000 ವರ್ಷಗಳ ಬಳಿಕವೂ ಜನವರಿ 22,2024ನ್ನು ಎಲ್ಲರೂ ನೆನಪಿಸುತ್ತಾರೆ: ಪ್ರಧಾನಿ ಮೋದಿ

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more