ಮಸೀದಿ ಜಾಗದಲ್ಲಿ ರಾಮ ಮಂದಿರವಂತೆ..! ಏನಿದು BBC ವಾಹಿನಿಯ ಉದ್ಧಟತನ..?

ಮಸೀದಿ ಜಾಗದಲ್ಲಿ ರಾಮ ಮಂದಿರವಂತೆ..! ಏನಿದು BBC ವಾಹಿನಿಯ ಉದ್ಧಟತನ..?

Published : Feb 05, 2024, 04:17 PM IST

ಏನಿದು BBC ವಾಹಿನಿಯ ಉದ್ಧಟತನ..? 
ಬ್ರಿಟನ್ ಸಂಸತ್ತಿನಲ್ಲೇ ಬಿಬಿಸಿಗೆ ಚಾಟಿ..!
ಭಾರತವೆಂದರೆ BBC ವಾಹಿನಿಗೇಕೆ ಬೇನೆ..?
 

ಬಿಬಿಸಿ..ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್. 1922ರಲ್ಲಿ ಬ್ರಿಟಿಷ್ ರಾಜಮನೆತವನವೇ ಬಂಡವಾಳ ಹಾಕಿ ಹುಟ್ಟುಹಾಕಿದ ಕಂಪನಿ ಇದು. ಜಗತ್ತಿನ ಅತಿ ಪುರಾತನ ಮಾಧ್ಯಮ ಸಂಸ್ಥೆ ಅನ್ನಿಸಿಕೊಂಡಿರೋ ಬಿಬಿಸಿಗೆ(BBC) ನೂರು ವರ್ಷಗಳ ಇತಿಹಾಸವಿದೆ. ಆದ್ರೆ ಇಂಥ ವಾಹಿನಿಗೆ ಭಾರತ(India) ಅಂದ್ರೆ ಅದೇನೋ ಸಹಿಸಲಾಗದ ಬೇನೆ ಶುರುವಾಗುತ್ತೆ. ಈ ಹಿಂದೆ ಭಾರತವನ್ನ , ಪ್ರಧಾನಿ ಮೋದಿಯವರನ್ನ ನಿಷೇಧಿತ ಡಾಕ್ಯುಮೆಂಟರಿ ಮೂಲಕ ತೆಗಳೋಕೆ ನೋಡಿದ್ದ ಬಿಬಿಸಿ ಈಗ ರಾಮ ಮಂದಿರದ(Ram Mandir) ವಿಚಾರಕ್ಕೆ ಅವರದೇ ದೇಶದವರಿಂದ ತಪರಾಕಿ ತಿಂತಿದೆ.  ಅಯೋಧ್ಯಾ(BBC) ರಾಮ ಮಂದಿರ ನಿರ್ಮಾಣ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠೆ ಕಂಡು ಸಮಸ್ತ ಆಸ್ತಿಕ ಹಿಂದೂ ಸಮಾಜ ಖುಷಿಯಿಂದ ಕಣ್ಣೀರಿಟ್ಟಿದೆ. ಶತಮಾನಗಳ ಹೋರಾಟಕ್ಕೆ ಸಿಕ್ಕ ಜಯ ಕಂಡು ಸಹಜವಾಗಿಯೇ ಹೃದಯ ತುಂಬಿ ಬಂದಿದೆ. ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಮೂಲೆ ಮೂಲೆಯಲ್ಲಿರೋ ರಾಮ ಭಕ್ತರು ಅಯೋಧ್ಯಾ ಮಂದಿರದ ಲೋಕಾರ್ಪಣೆಯನ್ನ ಕಣ್ತುಂಬಿಕೊಂಡು ರಾಮಧ್ಯಾನ ಮಾಡಿದ್ದಾರೆ. ಆದ್ರೆ ಜಗತ್ತಿನ ಖ್ಯಾತ ಸುದ್ದಿ ವಾಹಿನಿಗಳಲ್ಲಿ ಒಂದಾದ, ಭಾರತ , ಮೋದಿ,  ಹಿಂದೂಗಳು ಅಂದ್ರೆ ಹಲ್ಲು ಕಡಿಯುವ ಬಿಬಿಸಿ ಮಾತ್ರ, ತನ್ನ ವರದಿಯಲ್ಲಿ ಉದ್ಧಟತನ ತೋರಿಸಿತ್ತು. ಸತ್ಯವನ್ನ ಮುಚ್ಚಿಟ್ಟು ಅರೆಬೆಂದ ಕಥೆಯನ್ನ ಹೇಳಿತ್ತು. ರಾಮ ಮಂದಿರ ನಿರ್ಮಾಣವಾಗಿರೋದು ಧ್ವಂಸವಾದ ಮಸೀದಿ ಮೇಲೆ ಅನ್ನೋದನ್ನ ಹೇಳಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗಿದ್ದು ಹೇಗೆ ಅನ್ನೋದನ್ನ ಹೇಳದೇ ಕೂತು ಬಿಟ್ಟಿತ್ತು.

ಇದನ್ನೂ ವೀಕ್ಷಿಸಿ:  DK Suresh: ಅಂಕಿ ಅಂಶಗಳೊಂದಿಗೆ ಹಸ್ತಪಡೆ ‘ಸಿದ್ದ’..! ಕಾಂಗ್ರೆಸ್ ಕೈಗೆ ಅಸ್ತ್ರ ನೀಡಿತಾ ಬಿಜೆಪಿ..?

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more