ಕಂತೆ ಕಂತೆ ದುಡ್ಡೆಲ್ಲಾ ಯಾರ ಸ್ವತ್ತು..? ಹೇಗೆ ಬಂತು..? ಆ ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಧೀರಜ್ ಸಾಹು..?

ಕಂತೆ ಕಂತೆ ದುಡ್ಡೆಲ್ಲಾ ಯಾರ ಸ್ವತ್ತು..? ಹೇಗೆ ಬಂತು..? ಆ ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಧೀರಜ್ ಸಾಹು..?

Published : Dec 18, 2023, 02:27 PM IST

350 ಕೋಟಿಯ ರಹಸ್ಯವನ್ನ ಬಾಯ್ಬಿಟ್ಟರಾ ಕಾಂಗ್ರೆಸ್ ಸಂಸದ..? 
ಕೋಟಿ ಕೋಟಿ ಆಸ್ತಿಯ ಹಿಂದೆ ಅಡಗಿರೋದು ಯಾರ ಕೈವಾಡ.?  
ಕೋಟಿ ಕೋಟೆಯ ಹಿಂದೆ ಕಾಂಗ್ರೆಸ್  ಕೈವಾಡ! ಸಾಹು ಹೇಳಿದ್ದೇನು..?


ದುಡ್ಡು..ದುಡ್ಡು..ದುಡ್ಡು..ಎಲ್ಲಿ ನೋಡಿದ್ರೂ ರಾಶಿ ರಾಶಿ ನೋಟು. ಆ ನೋಟಿನ ಕಂತೆ  ಎಣಿಸೋಕಾಗದೆ ಮಿಷಿನ್‌ನೇ ಕೆಟ್ಟೋಯ್ತು. ಕಾಸಿನ ಕೋಟೆ ನೋಡಿ ಅಧಿಕಾರಿಗಳೇ ಸುಸ್ತಾದ್ರು. ನೋಡಿದೋರಿಗೆಲ್ಲಾ ಇದು ಸಂಸದನ ಮನೆ ಅಲ್ಲ. ನೋಟಿನ ಕೋಟೆ ಅನ್ನೋದು ಮನವರಿಕೆಯಾಯ್ತು. ಧೀರಜ್ ಸಾಹು ಒಡಿಶಾದ ಕಾಂಗ್ರೆಸ್ ಸಂಸದ(Congress MP). ಅಕ್ರಮ ಆಸ್ತಿಗಳಿಕೆ(Illegal property acquisition) ಅನುಮಾನದ ಮೇಲೆ ಐಟಿ ಪಡೆ ಸಾಹುಗೆ ಸಂಬಂಧಪಟ್ಟ ಹತ್ತಾರು ಕಡೆ ದಾಳಿ ನಡೆಸಿತ್ತು. ದಾಳಿ ನಡೀವಾಗ ಇಂಥದ್ದೊಂದು ಆಘಾತಕಾರಿ, ಅಚ್ಚರಿ ಬೇಟೆ ನಡೆಯಲಿದೆ ಅನ್ನೋದು ಆ ಅಧಿಕಾರಿಗಳಿಗೂ ಗೊತ್ತಿರ್ಲಿಲ್ವೋ ಏನೋ. ಆದ್ರೆ, ಧೀರಜ್ ಸಾಹು(Dheeraj Sahu) ಹಾಗೂ ಅವರ ಆಪ್ತರ ಮನೆಗಳ ಮೇಲೆ ರೈಡ್ ನಡೆದಾಗ, ನೋಟಿನ ದೇವತೆ ಅವರ ಮನೆಗಳಲ್ಲಿ ತಾಂಡವ ಆಡ್ತಾ ಇದ್ಲು. ಈ ದಾಳಿಲಿ ಸಿಕ್ಕಿರೋ ನೋಟಿನ ಬೆಲೆ ಎಷ್ಟು ಅನ್ನೋದನ್ನ ಲೆಕ್ಕಾ ಹಾಕೋಕೆ, ಒಂದಲ್ಲಾ ಎರಡಲ್ಲಾ, ಬರೋಬ್ಬರಿ ಒಂದು ಡಜನ್ ನೋಟು ಎಣಿಸೋ ಮಿಷಿನ್‌ಗಳನ್ನ ತರಸ್ಕೊಂಡಿದ್ರು. ಭುವನೇಶ್ವರದಿಂದ ಮಿಷಿನ್ ತರುಸ್ಕೊಂಡು ನೋಟು ಎಣಿಸಿದ್ರು ಅಧಿಕಾರಿಗಳು. ಒಂದಲ್ಲಾ ಎರಡಲ್ಲಾ, ಹೆಚ್ಚೂಕಮ್ಮಿ ಒಂದು ವಾರಗಳ ಕಾಲ ನಡೆದ ರೈಡ್ ಇದು. ಒಡಿಶಾ, ಜಾರ್ಖಂಡ್, ದೆಹಲಿ, ಈ ಮೂರೂ ರಾಜ್ಯಗಳಲ್ಲಿ, ಧಿರಜ್ ಸಾಹು ನಿಗೂಢ ವ್ಯವಹಾರ ನಡೆಸಿದ್ರು ಅನ್ನೋ ಮಾಹಿತಿ ಇದೆ. ಅದರ ಆಧಾರದ ಮೇಲೇ ಹೆಚ್ಚುಕಮ್ಮಿ ಒಂದು ಡಜನ್ ಜಾಗಗಳಲ್ಲಿ ಶೋಧ ಕಾರ್ಯ ನಡೀದಿತ್ತು. ಈ ಪರಿ ಲೆಕ್ಕಕ್ಕೆ ಸಿಗದ ದುಡ್ಡು ಪತ್ತೆಯಾಗಿರೋದು, ಕಾಂಗ್ರೆಸ್  ಸಂಸದರ ಮನೆಯಲ್ಲಿ.

ಇದನ್ನೂ ವೀಕ್ಷಿಸಿ:  ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು: ಹೊಸ ವರ್ಷಕ್ಕೆ ಪಾಲಿಕೆ, ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ರೆಡಿ !

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more