Tender Coconut Jelly: ಯಮ್ಮೀ ಯಮ್ಮೀ ಎಳನೀರು ಜೆಲ್ಲಿ.. ಎಲ್ಲಪ್ಪಾ ಎಲ್ಲಿ? ಜೇಬು ತುಂಬಿಸಿದ ಜೆಲ್ಲಿ ಬಿಸ್ನೆಸ್

Tender Coconut Jelly: ಯಮ್ಮೀ ಯಮ್ಮೀ ಎಳನೀರು ಜೆಲ್ಲಿ.. ಎಲ್ಲಪ್ಪಾ ಎಲ್ಲಿ? ಜೇಬು ತುಂಬಿಸಿದ ಜೆಲ್ಲಿ ಬಿಸ್ನೆಸ್

Published : Feb 28, 2022, 04:22 PM ISTUpdated : Feb 28, 2022, 04:27 PM IST

ಮಡಿಕೇರಿಯ ವಸುಧಾ ಕ್ಯಾಂಟೀನ್‌ನಲ್ಲಿ ಅಪರೂಪದ ಎಳನೀರು ಜೆಲ್ಲಿ
ಕಳೆದ 6 ವರ್ಷಗಳಿಂದ ಎಳನೀರು ಜೆಲ್ಲಿ ತಯಾರಿಸುತ್ತಿರುವ ದಂಪತಿ
ಎಳನೀರು ಜೆಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾದವರು ಅಪರೂಪ

ನಮಗೆಲ್ಲ ಎಳನೀರು ಕುಡಿದು ಗೊತ್ತು, ಇದರ ತಿಳಿಗಂಜಿ ತಿಂದು ಗೊತ್ತು, ಎಳನೀರು ಜ್ಯೂಸನ್ನೂ ಸವಿದಿದ್ದೇವೆ. ಆದರೆ ಬಹಳಷ್ಟು ಮಂದಿಗೆ ಎಳನೀರು ಜೆಲ್ಲಿ ಅಂದರೇನು ಅಂತ ಗೊತ್ತಿಲ್ಲ. ಎಲ್ಲಿ ಸಿಗುತ್ತದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾದರೆ ಒಮ್ಮೆ ಮಂಗಳೂರು-ಮೈಸೂರು ಹೆದ್ದಾರಿಯ ಕೊಡಗು ಜಿಲ್ಲೆಯ ದೇವರಕೊಲ್ಲಿ ಎಂಬ ಊರಿನತ್ತ ತೆರಳಿ. ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ಸಾಗುವಾಗ ಮಡಿಕೇರಿಯಿಂದ 19 ಕಿ.ಮೀ. ಮುಂದೆ ದೇವರಕೊಲ್ಲಿ ಎಂಬ ಪುಟ್ಟ ಊರು ಇದೆ. ಅಲ್ಲಿನ ವಸುಧಾ ಕ್ಯಾಂಟೀನ್ ನಲ್ಲಿ ಅಪರೂಪದ ಎಳನೀರು ಜೆಲ್ಲಿ ಸಿಗುತ್ತದೆ. ಕರ್ನಾಟಕ ಯಾಕೆ, ಇಡೀ ದೇಶದಲ್ಲೇ ಬೆರಳೆಣಿಕೆಯ ಮಂದಿ ಮಾತ್ರ ಎಳನೀರು ಜೆಲ್ಲಿ ಉತ್ಪಾದಿಸುತ್ತಾರೆ. ಥಾಯ್ಲಾಂಡ್, ಮಲೇಷಿಯಾದಂತಹ ದೇಶಗಳಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನವಾಗಿ ಹೆಸರು ಮಾಡಿರುವ ಟೆಂಡರ್ ಕೋಕೋನಟ್ ಜೆಲ್ಲಿಯನ್ನು ನಮ್ಮೂರಲ್ಲಿ ಉತ್ಪಾದಿಸಿದವರು ಕಮ್ಮಿ. ಹೀಗಿರುವಾಗ ಮಡಿಕೇರಿ ತಾಲೂಕು ಸಂಪಾಜೆಯ ರೈತ ಮಹಿಳೆ ವಸಂತಲಕ್ಷ್ಮೀ ಅವರು ತಮ್ಮ ಪತಿ ಸುಬ್ರಹ್ಮಣ್ಯ ಭಟ್ ಜೊತೆ ಸೇರಿ ಕಳೆದ 6 ವರ್ಷಗಳಿಂದ ವಸುಧಾ ಕ್ಯಾಂಟೀನಿನಲ್ಲಿ ಎಳನೀರು ಜೆಲ್ಲಿ ಮಾಡಿ ಹೆಸರು ಗಳಿಸಿದ್ದಾರೆ.

Egg Recipes: ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಫಟಾಫಟ್ ರೆಡಿ ಮಾಡ್ಬೋದು

ಹಿರಿಯ ಪತ್ರಕರ್ತ ಶ್ರೀಪಡ್ರೆ ಅವರು ಎಳನೀರು ಜೆಲ್ಲಿ ಕುರಿತು ತುಂಬ ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಎಳನೀರು ಜೆಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾದವರು ಯಾರೂ ಇಲ್ಲ... ಎಳನೀರಿನ ಜೆಲ್ಲಿ ಕುರಿತು ನಾವು ಗಮನ ಹರಿಸಿದ್ದು ಸಾಲದು ಎನ್ನುತ್ತಾರೆ ಶ್ರೀಪಡ್ರೆ ಅವರು.

Buttermilk Benifits: ಆಯುರ್ವೇದಲ್ಲಿ ಮಜ್ಜಿಗೆಗೇಕೆ ಇಷ್ಟೊಂದು ಪ್ರಾಶಸ್ತ್ಯ?
 
ಕಾಡುಪ್ರಾಣಿಗಳ ಉಪಟಳದಿಂದ ತೋಟದ ಬೆಳೆ ಪೂರ್ಣ ಪ್ರಮಾಣದಲ್ಲಿ ಕೈ ಸೇರದಿದ್ದಾಗ ವಸಂತಲಕ್ಷ್ಮೀ ದಂಪತಿ ಕಂಡುಕೊಂಡದ್ದು ಕ್ಯಾಂಟೀನ್ ವ್ಯವಹಾರ. ಅವರ ಕ್ಯಾಂಟೀನಿನಲ್ಲಿ ಟೀ, ಕಾಫಿ, ಜೊತೆಗೆ ಅವರೇ ಜಮೀನಿನಲ್ಲಿ ಅಭಿವೃದ್ಧಿಪಡಿಸಿದ ಜೇನುತುಪ್ಪ, ಮನೆಯಲ್ಲೇ ತಯಾರಿಸುವ ವೈನ್, ತಾವೇ ಬೆಳೆದ ಹುಣಸೇ ಹಣ್ಣನ್ನು ಸಹಿತ ಮಾರಾಟ ಮಾಡುತ್ತಾರೆ. ಸ್ವಾಭಿಮಾನಿ ರೈತರು ಸ್ವಾವಲಂಬಿಗಳಾಗಬಹುದು ಎಂಬುದಕ್ಕೆ ಈ ರೈತ ದಂಪತಿ ಸಾಕ್ಷಿ.

23:3220 ವರ್ಷಗಳಿಂದ ಗಿಳಿಗಳಿಗೆ ಅನ್ನ ನೀಡುತ್ತಿರುವ ಪುಣ್ಯವಂತ!
19:35Bellulli Kabab Chandru: ಯುಗಾದಿ ಹಬ್ಬದಲ್ಲಿ ಕಬಾಬ್ ಚಂದ್ರು ಹೊಸ್ತಡ್ಕು! ಬಾಡೂಟ ಮಾಡಿ ಒನ್ ಮೋರ್ ಒನ್ ಮೋರ್ ಅನ್ನಿ!
17:41Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!
05:08ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ
03:59ಬೆಂಗಳೂರಲ್ಲಿ ‘ಮಹಾಲಕ್ಷ್ಮೀ ಲೇಔಟ್ ಹಬ್ಬ’ ಸಂಭ್ರಮ: ಕನ್ನಡಪ್ರಭ, ಸುವರ್ಣ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ
01:13Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?
02:18ಮಾಂಸ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಅನ್ನೋದ್ಯಾಕೆ? ತಜ್ಞರ ಉತ್ತರ ಇಲ್ಲಿದೆ
04:02Health Tips: ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ
03:11ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದೇ ಕೊನೆ ದಿನ: ಬನ್ನಿ ಭಾಗವಹಿಸಿ..ವೀಕೆಂಡ್‌ನಲ್ಲಿ ಸಂಭ್ರಮಿಸಿ
04:10‘ಜಯನಗರ ಸಂಭ್ರಮ’ ಫುಡ್ ಫೆಸ್ಟಿವಲ್‌ಗೆ ಚಾಲನೆ: ಕನ್ನಡ ಪ್ರಭ - ಸುವರ್ಣ ನ್ಯೂಸ್ ಸಹಯೋಗ
Read more