ಗುರು ಪೂರ್ಣಿಮೆ ದಿನದ ವಿಶೇಷತೆಯನ್ನು, ಮಹತ್ವವನ್ನು ಬಹಳ ಚಿಂತನಶೀಲವಾಗಿ ಆಧ್ಯಾತ್ಮಿಕ ಚಿಂತಕರೂ, ಜ್ಯೋತಿಷಿಗಳೂ ಆದ ಹರೀಶ್ ಕಶ್ಯಪ್ ವಿವರಿಸಿದ್ದಾರೆ ಕೇಳಿ.
ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮಃ
ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯ ಈ ದಿನ ಬಹಳ ವಿಶೇಷ. ಆಷಾಢ ಮಾಸದ ಪೂರ್ಣಿಮೆಯಂದು ವೇದವ್ಯಾಸರು ಜನಿಸಿದ ದಿನ. ಹಾಗಾಗಿ, ವೇದ, ಶಾಸ್ತ್ರ, ಜ್ಞಾನ, ವಿಜ್ಞಾನದ ತವನಿಧಿಯಾದ ವೇದವ್ಯಾಸರು ಜನಿಸಿದ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತೇವೆ.
ಪೂರ್ಣಿಮೆಯಂದು ಇದನ್ನು ಆಚರಿಸುವುದರ ಹಿಂದೆ ಬಹಳಷ್ಟು ವಿಶೇಷತೆಗಳಿವೆ. ಈ ದಿನದ ಮಹತ್ವವೇನು? ಹೇಗೆ ಆಚರಿಸಬೇಕು? ಎಲ್ಲವನ್ನೂ ವಿವರವಾಗಿ ಆಧ್ಯಾತ್ಮಿಕ ಚಿಂತಕರೂ, ಜ್ಯೋತಿಷಿಗಳೂ ಆದ ಹರೀಶ್ ಕಶ್ಯಪ್ ವಿವರಿಸಿದ್ದಾರೆ ಕೇಳಿ.