Feb 24, 2021, 11:46 AM IST
ಶಕುನಿ ಎಂಬ ರಾಕ್ಷಸ ಒಂದು ದಿನ ಶಂಕರನನ್ನು ಕುರಿತು ತಪಸ್ಸು ಮಾಡುತ್ತಾನೆ. ಶಕುನಿ ಶಂಕರನಿಗೆ ಕೇಳುತ್ತಾನೆ. ನಾನು ಯಾರ ತಲೆ ಮೇಲೆ ಕೈ ಇಡುತ್ತೇನೋ ಅವರು ಸಾವನ್ನಪ್ಪಬೇಕು ಎಂದು ವರ ಕೇಳುತ್ತಾನೆ. ಅವನಿಗೆ ಒಮ್ಮೆ ಗೌರಿ ದೇವಿಯನ್ನು ಅಪಹರಿಸುವ ಮನಸ್ಸಾಗುತ್ತದೆ. ಆದರೆ ಅದು ಸುಲಭವಲ್ಲ. ಶಿವ ಜೊತೆಯಲ್ಲೇ ಇರುತ್ತಾನಲ್ಲ, ಆಗ ಶಿವನ ತಲೆ ಮೇಲೆ ಕೈ ಇಡಲು ಹೋಗುತ್ತಾನೆ. ಶಿವ ಓಡಿ ಹೋಗಿ ಶ್ರೀಹರಿ ಲೋಕಕ್ಕೆ ಹೋಗುತ್ತಾನೆ. ಹರಿಗೆ ವಿಚಾರ ಗೊತ್ತಾಗಿ ಬ್ರಹ್ಮಚಾರಿ ರೂಪ ಧರಿಸಿ ರಾಕ್ಷಸನ ಎದುರಿಗೆ ಬರುತ್ತಾನೆ.