ಬೆಂಗಳೂರಿನಲ್ಲಿ ಕಣ್ತುಂಬಿಕೊಳ್ಳಿ ತಿರುಪತಿ ದೇವಾಲಯದ ಪ್ರತಿರೂಪ ರಾಜಾಧಿರಾಜ ಗೋವಿಂದ ಮಂದಿರ

Jun 18, 2022, 7:57 PM IST

ಬೆಂಗಳೂರಿನ ಕನಕಪುರ ರಸ್ತೆಯ ವಸಂತಪುರದಲ್ಲಿ ಇಸ್ಕಾನ್  ಶ್ರೀ ರಾಜಾಧಿರಾಜ ಗೋವಿಂದ ಮಂದಿರವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದೆ. ಈ ದೇವಾಲಯವು ತಿರುಪತಿ ತಿಮ್ಮಪ್ಪನ ಸನ್ನಿಧಾನದ ಪ್ರತಿರೂಪವನ್ನೇ ಹೊತ್ತಿರುವುದು ವಿಶೇಷ. ಇಲ್ಲಿಗೆ ಜುಲೈ 31ರಿಂದ ಭಕ್ತರ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತದೆ. 28 ಎಕರೆ ಪ್ರದೇಶದಲ್ಲಿ 150 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಕಣ್ಣಿಗೆ ಹಬ್ಬ, ಮನಸ್ಸಿಗೆ ತಂಪು ನೀಡುವುದರಲ್ಲಿ ಸಂಶಯವಿಲ್ಲ. 

ಮುತ್ತನ್ನು ಈ ಆರು ರತ್ನಗಳೊಂದಿಗೆ ಧರಿಸಿದರೆ ಅಪಾಯ ತಪ್ಪಿದ್ದಲ್ಲ!

ಈ ದೇವಸ್ಥಾನದಲ್ಲಿ ಸಾಕಷ್ಟು ವಿಶೇಷತೆಗಳಿವೆ, ಕಣ್ಮನ ಸೆಳೆವ ಬಹಳಷ್ಟು ವೈಭೋಗಗಳಿವೆ. ಅವೇನು, ದೇವಾಲಯ ನೋಡಲು ಹೇಗಿದೆ ತಿಳಿಯಲು ಈ ವಿಡಿಯೋ ನೋಡಿ.