Aug 3, 2020, 11:26 AM IST
ಬೇರೆ ಹೆಣ್ಣು ಮಕ್ಕಳನ್ನು, ಅಕ್ಕ ತಂಗಿಯರನ್ನು ಗೌರವಿಸುತ್ತಾನೋ, ಬೇರೆಯವರ ಹಣಕ್ಕೆ ಆಸೆಪಡುವುದಿಲ್ಲವೋ ಅವನೇ ನಿಜವಾದ ಪಂಡಿತ ಎನ್ನುತ್ತದೆ ಶಾಸ್ತ್ರ. ನಮ್ಮ ಸಂಪ್ರದಾಯದಲ್ಲಿ ತಾಯಿಯನ್ನು ಪೂಜಿಸುತ್ತೇವೆ. ಅದೇ ರೀತಿ ಬೇರೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಬೇರೆಯವರ ಸಂಪತ್ತಿಗೆ ಆಸೆಪಡಬಾರದು. ಬೇರೆಯವರು ಚೆನ್ನಾಗಿದ್ದರೆ ನೋಡಿ ಖುಷಿಪಡಬೇಕು. ಸನ್ಮಾರ್ಗವಾಗಿ ನಡೆಯುವ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ..!