ಮತ್ತೆ ಒಂದಾದ ಕಿಲಾಡಿ ಜೋಡಿ ರಿಷಬ್-ತಾರಕ್ ! ವೇದಿಕೆಯಲ್ಲಿ ಕುಂದಾಪುರ ಕಲಿಗಳ ಸಮಾಗಮ..!

ಮತ್ತೆ ಒಂದಾದ ಕಿಲಾಡಿ ಜೋಡಿ ರಿಷಬ್-ತಾರಕ್ ! ವೇದಿಕೆಯಲ್ಲಿ ಕುಂದಾಪುರ ಕಲಿಗಳ ಸಮಾಗಮ..!

Published : Sep 30, 2025, 03:22 PM IST

ರಿಷಬ್ ಶೆಟ್ಟಿ ಈಗ ಚಿತ್ರ ಜಗತ್ತಿನ ಡಾರ್ಲಿಂಗ್.. ಒಂದು ಕಡೆ ರಾಕಿಂಗ್ ಸ್ಟಾರ್ ಯಶ್​ ಹೇಗೆ ಪರಭಾಷಾ ಸ್ಟಾರ್ಸ್​ಗಳ ಮನಸ್ಸು ಗೆಲ್ಲುತ್ತಾ ಹೋಗುತ್ತಿದ್ದಾರೋ. ಹಾಗೆ ಮತ್ತೊಂದು ಕಡೆ ರಿಷಬ್ ಶೆಟ್ಟಿ ನಮ್ಮ ಅಕ್ಕ ಪಕ್ಕದ ರಾಜ್ಯದ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹಾರ್ಟ್​​ನಲ್ಲಿ ಜಾಗ ಭದ್ರ ಮಾಡಿಕೊಂಡಿದ್ದಾರೆ.

ಟಾಲಿವುಡ್​ಸೂಪರ್ ಸ್ಟಾರ್ ಜ್ಯೂನಿಯರ್​ಜೂ. ಎನ್‌ಟಿಆರ್​(Jr NTR) ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಾರಂತೆ. ಕಾಂತಾರದಲ್ಲಿ ಜ್ಯೂನಿಯರ್ ಎನ್​ಟಿಆರ್ ನಟಿಸಿದ್ದಾರಂತೆ. ಜ್ಯೂನಿಯರ್ ಎನ್​ಟಿಆರ್ ಹಾಗು ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಮ್ಮ ಶೆಟ್ರು ಕಾಣಿಸುತ್ತಾರಂತೆ. ಹೀಗೆ ಜ್ಯೂನಿಯರ್ ಎನ್‌ಟಿಆರ್ ಹಾಗು ರಿಷಬ್ ಶೆಟ್ರು ಬಗ್ಗೆ ತರಹೇವಾರಿ ಕಥೆ ಕವನಗಳೆಲ್ಲಾ ಸೃಷ್ಟಿಯಾಗಿದ್ವು. ಅವರೆಲ್ಲರ ಹಾರೈಕೆಯೋ ಏನೋ.. ರಿಷಬ್ ಶೆಟ್ರು ತಂಡದ ಜೊತೆ ತಾರಕ್​​ ಪ್ರತ್ಯಕ್ಷರಾಗಿದ್ದಾರೆ. ಅದು ಯಾಕೆ ಅಂತ ಗೊತ್ತಾ..? ಇಲ್ಲಿದೆ ನೋಡಿ..

ರಿಷಬ್ ಶೆಟ್ಟಿ ಈಗ ಚಿತ್ರ ಜಗತ್ತಿನ ಡಾರ್ಲಿಂಗ್.. ಒಂದು ಕಡೆ ರಾಕಿಂಗ್ ಸ್ಟಾರ್ ಯಶ್​ ಹೇಗೆ ಪರಭಾಷಾ ಸ್ಟಾರ್ಸ್​ಗಳ ಮನಸ್ಸು ಗೆಲ್ಲುತ್ತಾ ಹೋಗುತ್ತಿದ್ದಾರೋ. ಹಾಗೆ ಮತ್ತೊಂದು ಕಡೆ ರಿಷಬ್ ಶೆಟ್ಟಿ ನಮ್ಮ ಅಕ್ಕ ಪಕ್ಕದ ರಾಜ್ಯದ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹಾರ್ಟ್​​ನಲ್ಲಿ ಜಾಗ ಭದ್ರ ಮಾಡಿಕೊಂಡಿದ್ದಾರೆ. ರಿಷಬ್ ಹೃದಯದಲ್ಲಿ ಭದ್ರವಾಗಿರೋ ಸ್ಟಾರ್​​ರಲ್ಲೊಬ್ಬರು ಜ್ಯೂನಿಯರ್ ಎನ್​​ಟಿಆರ್..

ಯೆಸ್, ಜ್ಯೂನಿಯರ್ ಎನ್​ಟಿಆರ್​. ನಮ್ಮ ಪವರ್ ಸ್ಟಾರ್ ಪುನೀತ್​ ರಾಜ್​​ಕುಮಾರ್​ ಅಪ್ಪ ಅಪ್ಪಟ ಸ್ನೇಹಿತ. ಈ ತಾರಕ್​​ ರಾಮ್​​​ ಅಪ್ಪುಗಾಗಿ ಗೆಳೆಯಾ ಗೆಳೆಯಾ ಅಂತ ಸಾಂಗ್ ಹಾಡಿ ಹೋಗಿದ್ದನ್ನ ಎಂದಾದ್ರು ಮರೆಯೋಕೆ ಸಾಧ್ಯನಾ..
( ಜ್ಯೂಎನ್​ಟಿಆರ್ ಹಾಡಿರೋ ಕನ್ನಡದ ಗೆಳೆಯಾ ಸಾಂಗ್​ ಫ್ಲೊ..)

ರಿಷಬ್ ಶೆಟ್ಟಿ ಜ್ಯೂನಿಯರ್ ಎನ್​ಟಿಆರ್ ಇದೀಗ ಮತ್ತೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಅದು ಕಾಂತಾರದ ವೇದಿಕೆ ಮೇಲೆ ಕುಂದಾಪುರದ ಈ ಖಲಿಗಳು ಮಿಂಚಿದ್ದಾರೆ. ಹೈದರಾಬ್​​​ನಲ್ಲಿ ಕಾಂತಾರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದ್ದು, ನಟ ರಿಷಬ್ ಶೆಟ್ಟಿಯ ಗೆಲುವಿಗಾಗಿ ಗೆಳೆಯ ಜ್ಯೂ,ಎನ್​ಟಿಆರ್​​ ಗೆಸ್ಟ್ ಆಗಿ ಬಂದು ಇಡೀ ಕಾಂತಾರ ತಂಡದ ಬೆನ್ನು ತಟ್ಟಿದ್ದಾರೆ..

ಜ್ಯೂನಿಯರ್​ ಎನ್​​ಟಿಆರ್ ರಕ್ತದಲ್ಲಿ ಕರ್ನಾಟಕದ ನಂಟಿದೆ. ತಾರಕ್​ ರಾಮ್​​​​​​ ತಾಯಿ ಹುಟ್ಟಿದ್ದು ಕರ್ನಾಟಕದ ಉಡುಪಿಯ ಕುಂದಾಪುರದಲ್ಲಿ. ಹೀಗಾಗಿ ಜ್ಯೂ,ಎನ್​ಟಿಆರ್​​​ಗೆ ಕನ್ನಡದ ನಂಟು ರಕ್ತಗತವಾಗೆ ಬಂದಿದೆ. ಕನ್ನಡಿಗರ ಮೇಲೆ ಅಪಾರ ಪ್ರೀತಿ ಅಭಿಮಾನ ಬೆಳೆಸಿಕೊಂಡಿರೋ ಜ್ಯೂನಿಯರ್ ಎನ್​ಟಿಆರ್​ ಕನ್ನಡಿಗರ ದೊಡ್ಡ ಕನಸು ಕಾಂತಾರ ಅಧ್ಯಾಯ ಒಂದರ ಸಕ್ಸಸ್​​ಗಾಗಿ ಹಾರೈಸಿದ್ದಾರೆ. ಅಷ್ಟೆ ಅಲ್ಲ ಕಾಂತಾರದ ಸೂತ್ರಧಾರಿ ರಿಷಬ್ ಶೆಟ್ಟಿ ಜೊತೆಗಿನ ಸ್ನೇಹವನ್ನೂ ಮೆಲುಕು ಹಾಕಿದ್ರು..

ಕಾಂತಾರ ಚಾಪ್ಟರ್​ ಒನ್ ಸಿನಿಮಾ ಶೂಟಿಂಗ್ ನಡೆಯುವಾಗ್ಲೆ ಟಾಲಿವುಡ್ ಸ್ಟಾರ್​ ಜ್ಯೂನಿಯರ್ ಎನ್​​ಟಿಆರ್​ ಉಡುಪಿಗೆ ಬಂದಿದ್ರು. ತನ್ನ ಅಮ್ಮ ಶಾಲಿನಿ ಅವರು ಕುಂದಾಪುರದವರೇ ಆಗಿರೋದ್ರಿಂದ ಉಡುಪಿ ಶ್ರೀ ಕೃಷ್ಣ ದೇವಾಲಯಗಳಿಗೆ ಭೇಟಿ ನೀಡಿ ಎಂದೋ ಮಾಡಿದ್ದ ಹರಕೆಗಳನ್ನ ತೋರಿಸಿದ್ರು. ಆಗ ನಟ ರಿಷಬ್ ಶೆಟ್ಟಿ ದಂಪತಿ
ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಜ್ಯೂ,ಎನ್​ಟಿಆರ್​​ ರನ್ನ ಸ್ವಾಗತಿಸಿದ್ರು. ಇಡೀ ಫ್ಯಾಮಿಲಿಗೆ ಅಥಿತಿ ಸತ್ಕಾರ ಮಾಡಿ, ದೇಗುಲಗಳ ದರ್ಶನದಲ್ಲಿ ಜೊತೆಯಾಗಿದ್ರು. ಅಷ್ಟೆ ಅಲ್ಲ ತನ್ನೂರಾದ ಕೆರಾಡಿಯನ್ನೂ ಜ್ಯೂನಿಯರ್​ ಎನ್​ಟಿಆರ್​​​​ಗೆ ಪರಿಚಯಿಸಿದ್ರು ರಿಷಬ್...

ಕಾಡುಬೆಟ್ಟದ ಶಿವನನ್ನು ಮೆಚ್ಚಿದ್ದ ಜ್ಯೂ,ಎನ್​ಟಿಆರ್..!

ಈ ಹಿಂದೆ ಕಾಂತಾರ ಸಿನಿಮಾ ಬಂದಾಗ ಜ್ಯೂನಿಯರ್ ಎನ್​​ಟಿಆರ್​ ಆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ರು. ಅಷ್ಟೆ ಅಲ್ಲ ರಿಷಬ್​ರನ್ನ ಕೆರಾಡಿಯಲ್ಲಿ ಭೇಟಿ ಮಾಡಿದಾಗ ನನಗೆ ರಿಷಬ್ ಶೆಟ್ಟಿ ದೇವರು ಕೊಟ್ಟ ಗೆಳೆಯ ಅಂತ ಹೇಳಿದ್ರು. ಇದಾದ್ಮೇಲೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ. ಕಾಂತಾರ ಚಾಪ್ಟರ್ ಒಂದರಲ್ಲಿ ಜ್ಯೂಎನ್​ಟಿಆರ್ ನಟಿಸುತ್ತಿದ್ದಾರೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಆದ್ರೆ ಅದು ಸತ್ಯಕ್ಕೆ ದೂರಾದ ಮಾತು. ಈಗ ಕಾಂತಾರ ದಂತಕತೆಯನ್ನ ತನ್ನ ಆಂಧ್ರ ನಾಡಿನ ಮಂದಿಗೆ ತೋರಿಸೋಕೆ ಜ್ಯೂ,ಎನ್​ಟಿಆರ್​ ಕಾಂತಾರ ವೇಧಿಕೆ ಹತ್ತಿದ್ದು,  ಆಂಧ್ರದಲ್ಲೂ ಕಾಂತಾರದ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಈ ಸಿನಿಮಾವನ್ನ ನಮ್ಮ ತೆಲುಗು ಮಂದಿ ಗೆಲ್ಲಿಸುತ್ತಾರೆ ಅಂತ ತಾರಕ್ ರಾಮ್ ರಿಷಬ್‌ಗೆ ಭರವಸೆ ಕೊಟ್ಟಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ!

05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
Read more