ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು:  ಮಗಳ ಸಾವಿನ ವರ್ಷದ ಬಳಿಕ ಸೇಡು ತೀರಿಸಿಕೊಂಡ ಅಪ್ಪ!

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು: ಮಗಳ ಸಾವಿನ ವರ್ಷದ ಬಳಿಕ ಸೇಡು ತೀರಿಸಿಕೊಂಡ ಅಪ್ಪ!

Published : Jan 29, 2025, 12:30 PM IST

ಗುಂಡೇಟು ತಿಂದು ಹೀಗೆ ಹೆಣವಾಗಿ ಬಿದ್ದವನು ತಿಕೋಟಾ ತಾಲೂಕಿನ ಅರಕೇರಿ ತಾಂಡಾ ನಿವಾಸಿ ಸತೀಶ್ ರಾಠೋಡ್. ಅದೇ ತಾಂಡಾದ ರಮೇಶ್​​ ಚವ್ಹಾಣ್​ ಹಾಗೂ ಆತನ ಸಹಚರರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಈ ಡೆಡ್ಲಿ ಮರ್ಡರ್​ಗೆ ಕಾರಣವಾಗಿದ್ದು ರಮೇಶ್​ ಚವ್ಹಾಣ್​ ಮಗಳು ಹಾಗೂ ಸುರೇಶ್​ ರಾಠೋಡ್​​ ನಡುವಿನ ಪ್ರೇಮ್​ಕಹಾನಿ. 

ವಿಜಯಪುರ(ಜ.29):  ಗುಮ್ಮಟನಗರಿಯಲ್ಲಿ ಹಾಡಹಗಲೇ ಗುಂಡಿನ ಸದ್ದು ಮಾರ್ದನಿಸಿದೆ. ಪ್ರೇಮ್​ಕಹಾನಿ ವಿಚಾರವಾಗಿ ಶುರುವಾದ ಕಲಹ ಜೀವವನ್ನೇ ಬಲಿ ಪಡೆದಿದೆ. ಮಗಳ ಸಾವಿಗೆ ವರ್ಷದ ಬಳಿಕ ಅಪ್ಪ ಸೇಡು ತೀರಿಸಿಕೊಂಡಿದ್ದಾನೆ. 

ಭೀಮಾತೀರದ ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಹಾಡಹಗಲೇ ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ತಿಕೋಟ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಭೀಕರ ಹತ್ಯೆಗೆ ಸಾಕ್ಷಿಯಾಗಿದೆ.
ಗುಂಡೇಟು ತಿಂದು ಹೀಗೆ ಹೆಣವಾಗಿ ಬಿದ್ದವನು ತಿಕೋಟಾ ತಾಲೂಕಿನ ಅರಕೇರಿ ತಾಂಡಾ ನಿವಾಸಿ ಸತೀಶ್ ರಾಠೋಡ್. ಅದೇ ತಾಂಡಾದ ರಮೇಶ್​​ ಚವ್ಹಾಣ್​ ಹಾಗೂ ಆತನ ಸಹಚರರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಈ ಡೆಡ್ಲಿ ಮರ್ಡರ್​ಗೆ ಕಾರಣವಾಗಿದ್ದು ರಮೇಶ್​ ಚವ್ಹಾಣ್​ ಮಗಳು ಹಾಗೂ ಸುರೇಶ್​ ರಾಠೋಡ್​​ ನಡುವಿನ ಪ್ರೇಮ್​ಕಹಾನಿ. 

ರಮೇಶ್​ ಚವ್ಹಾಣ್​ ಮಗಳು ಹಾಗೂ ಸತೀಶ್​ ರಾಠೋಡ್​ ಪರಸ್ಪರ ಪ್ರೀತಿ ಮಾಡ್ತಿದ್ರು. ಸತೀಶ್​ ಕುಟುಂಬಸ್ಥರು ರಮೇಶ್ ಚವ್ಹಾಣ್​ ಬಳಿ ಮದುವೆ ಪ್ರಸ್ತಾಪವನ್ನೂ ಮಾಡಿದ್ದರು. ಆದ್ರೆ ಸತೀಶ್​ಗೆ ಮಗಳನ್ನ ಕೊಡಲು ರಮೇಶ್​ ನಿರಾಕರಿಸಿದ್ದ. ಇದೇ ವಿಚಾರವಾಗಿ 2 ಕುಟುಂಬಗಳ ಮಧ್ಯೆ ವೈಷಮ್ಯ ಬೆಳೆದಿತ್ತು. ಇದೆಲ್ಲದರಿಂದ ಮನನೊಂದಿದ್ದ ರಮೇಶ್ ಚವ್ಹಾಣ್​ ಮಗಳು ಕಳೆದ ವರ್ಷ ಜನವರಿ 28ರಂದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿಗೆ ಸತೀಶನೇ ಕಾರಣ ಅಂತಾ ರಮೇಶ್​​ ಸಿಟ್ಟಿಗೆದ್ದಿದ್ದ. ಹೀಗಾಗಿ ಮಗಳ ಮೊದಲ ವರ್ಷದ ತಿಥಿಯಂದೇ ಸತೀಶ್​ ಹತ್ಯೆಗೆ ಮುಹೂರ್ತ ಫಿಕ್ಸ್​ ಮಾಡಿದ್ದ. ಅದ್ರಂತೆ ಇಂದು ಕಾರಿ​ನಲ್ಲಿ ಬರ್ತಿದ್ದಾಗ ಸತೀಶ್​​ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾನೆ.  

ಸತೀಶ್​ ರಾಠೋಡ್​ ಹತ್ಯೆಗೈದ ಹಂತಕರು ಆತನ ಶವದ ಮೇಲೆ ಕಂಟ್ರಿಮೇಡ್​ ಪಿಸ್ತೂಲ್​ ಇಟ್ಟು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more