ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!

Published : May 26, 2024, 03:46 PM ISTUpdated : May 26, 2024, 03:47 PM IST

ಪೊಲೀಸರಿಂದ ಸತ್ತಿಲ್ಲ ಎಂದ ಆದಿಲ್ ತಂದೆ 
ಚನ್ನಗಿರಿ ಸ್ಟೇಷನ್ ಮುಂದೆ ಭಾರೀ ಹೈಡ್ರಾಮಾ
ಡಿವೈಎಸ್ಪಿ, ಇನ್ ಸ್ಪೆಕ್ಟರ್ ಇಬ್ಬರೂ ಅಮಾನತು
ಯುವಕನದ್ದು ಲಾಕಪ್ ಡೆತ್ ಅಲ್ಲ ಎಂದ ಸಿಎಂ


ಅವನು ಮಟ್ಕಾ(Matka) ಬರೆಯುತ್ತಿದ್ದವನು. ಅದೇ ಅವನ ಬ್ಯುಸಿನೆಸ್. ಈಗಾಗಲೇ ಅವನ ಮೇಲೆ ಮೂರು ಕೇಸ್‌ಗಳಿವೆ. ಅದೇ ಕೇಸ್ ಮೇಲೆ ನಿನ್ನೆ ಅವನನ್ನ ಪೊಲೀಸ್ ಠಾಣೆಗೆ ಕರೆತಂದಿದ್ರು. ಆದ್ರೆ ಆತ ಠಾಣೆಗೆ ಬಂದ 10 ನಿಮಿಷದಲ್ಲೇ ಆತ ಕುಸಿದು ಬಿದ್ದು ಪ್ರಾಣಬಿಟ್ಟಿದ್ದ. ಯಾವಾಗ ಆತ ಸತ್ತ ಅನ್ನೋದು ಗೊತ್ತಾಯ್ತೋ. ದುಷ್ಕರ್ಮಿಗಳ (lockup death)ತಂಡ ಠಾಣೆ ಎದುರು ಬಂತು. ನೋಡ ನೋಡ್ತಿದ್ದಂತೆ ಠಾಣೆ(Channagiri police station) ಮತ್ತು ಪೊಲೀಸ್ ವಾಹನಗಳನ್ನ ಪುಡಿ ಪುಡಿ ಮಾಡಿದ್ರು. ಎಷ್ಟೇ ಆಗಲಿ ಅವರು ಹೆತ್ತವರು. ಮಗನನ್ನ ಕಳೆದುಕೊಂಡ ನೋವಲ್ಲಿ ಹೀಗೆಲ್ಲಾ ಮಾತನ್ನಾಡ್ತಿದ್ದಾರೆ. ನಿಜ ಏನು ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಆದ್ರೆ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿಬಿಡ್ತು. ಇತ್ತಿಚೆಗೆ ಪ್ರತೀ ಕೊಲೆಗೂ(Murder) ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಈಗ ಆದೀಲ್ ಸಾವಿನಲ್ಲೂ(Adil Died) ರಾಜಕೀಯ ಶುರುವಾಗಿದೆ. ಸರ್ಕಾರ ಆದೀಲ್ ಸಾವಿಗೆ ಆತನಿಗಿದ್ದ ಖಾಯಿಲೇಯೇ ಕಾರಣ ಅಂದ್ರೆ ವಿರೋಧ ಪಕ್ಷಗಳು ಮತ್ತೆ ಕಾನೂನು ಸುವ್ಯಸ್ಥೆಯ ಪ್ರಶ್ನೆ ಎತ್ತಿದೆ.. ಇದರ ನಡುವೆ. ಆದೀಲ್ನನ್ನ FIR ಆಗದೇಯೇ ಬಂಧಿಸಿದ್ದ ಇಬ್ಬರು ಆಧಿಕಾರಿಗಳನ್ನ ಸರ್ಕಾರ ಅಮಾನತ್ತು ಮಾಡಿದೆ. ಆದಿಲ್ ಸಾವಿಗೆ ಇಜವಾದ ಕಾರಣವೇನು ಅನ್ನೋದು ಇವತ್ತಲ್ಲ ನಾಳೆ ಗೊತ್ತಾಗಲಿದೆ. ಅದಕ್ಕೆ ತನಿಖಾ ತಂಡ ಮತ್ತು ಕಾನೂನು ಇದೆ. ಆದ್ರೆ ಇದೇ ಕಾರಣವನ್ನ ಇಟ್ಟುಕೊಂಡು ದೊಂಬಿ ಎಬ್ಬಿಸುತ್ತಿರೋರು ನಮ್ ಮಧ್ಯೆದಲ್ಲೇ ಇದ್ದಾರೆ.. ಅವರಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು.

ಇದನ್ನೂ ವೀಕ್ಷಿಸಿ:  Accident in Uttar Pradesh: ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ.. ಬಸ್‌ ಮೇಲೆ ಬಿದ್ದ ಲಾರಿ : 11 ಜನ ದುರ್ಮರಣ

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ