ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

Published : Jul 31, 2024, 01:06 PM ISTUpdated : Jul 31, 2024, 01:10 PM IST

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.
 

ಕಲಬುರಗಿ(ಜು.31):   ಆಕೆ 68 ವರ್ಷದ ಅಜ್ಜಿ... ತನ್ನವರು ಅಂತ ಯಾರೂ ಇಲ್ಲ.. ಆದ್ರೂ ತನ್ನ ಏರಿಯದಲ್ಲಿರೋರಿಗೆಲ್ಲಾ ಬಡ್ಡಿಗೆ ದುಡ್ಡು ಕೊಡ್ತಿದ್ದಳು.. ಕಷ್ಟ ಅಂತ ಬಂದ್ರೆ ಹಿಂದೆ ಮುಂದೆ ನೋಡದೇ ಸಾಲ ಕೊಡ್ತಿದ್ದಳು. ಅಂಥಹ ಅಜ್ಜಿ ಆವತ್ತು ಇದ್ದಕ್ಕಿದ್ದಂತೆ ಮಿಸ್ಸಿಂಗ್​​​​.. ಎಲ್ಲಿ ಹುಡುಕಿದ್ರೂ ಅವಳ ಸುಳಿವು ಸಿಕ್ಕಿರಲಿಲ್ಲ.. ಪರಿಸ್ಥಿತಿ ಹೀಗಿರವಾಗ್ಲೇ ಆಕೆಯ ಸಾವಿನ ಸುದ್ದಿ ಬಂದಿತ್ತು.. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಬೆಂಕಿ ಹಾಕಿ ಸುಟ್ಟುಬಿಟ್ಟಿದ್ದ.. ಒಂದೇ ಒಂದು ಕ್ಲೂ ಆ ಮರ್ಡರ್​ ಕೇಸ್​ನಲ್ಲಿ ಪೊಲೀಸರಿಗೆ ಸಿಕ್ಕಿರಲಿಲ್ಲ.. ಆದ್ರೆ ಛಲಬಿಡದ ಪೊಲೀಸರು ಕೊನೆಗೂ ಹಂತಕನ ಹೆಡೆಮುರಿ ಕಟ್ಟಿದ್ದಾರೆ.. ಹಾಗಾದ್ರೆ ಅಜ್ಜಿಯನ್ನ ಕೊಂದಿದ್ಯಾರು..? ಬಡ್ಡಿ ಬಸ್ಸಮ್ಮಳ ಕೊಲೆಯ ಹಿಂದಿನ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಊರಿನವಿರಿಗೆಲ್ಲಾ ಬಡ್ಡಿಗೆ ದುಡ್ಡು ಕೊಟ್ರೂ.. ಈಕೆ ಮಾತ್ರ ಬೀದಿಯಲ್ಲಿ ಜೀವನ ಮಾಡ್ತಿದ್ದಳು.. ಆದ್ರೆ ಆವತ್ತೊಂದು ದಿನ ಇದ್ದಕಿದ್ದಾಗೆ ಬಸಮ್ಮ ಹೆಣವಾಗಿ ಬಿಡ್ತಾಳೆ.. ಹಂತಕ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿ ನಂತರ ಪೆಟ್ರೋಲ್​ ಹಾಕಿ ಸುಟ್ಟುಬಿಟ್ಟಿರುತ್ತಾನೆ.

ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ಬಡ್ಡಿಗೆ ದುಡ್ಡು ಕೊಡ್ತಿದ್ದ ಬಸಮ್ಮ ಅವನೊಬ್ಬನಿಗೆ ತನ್ನ ಬಳಿ ಇದ್ದ ಒಡವೆಯನ್ನೇ ಕೊಟ್ಟು ಬಿಟ್ಟಿದ್ಲು.. ಆತ ಆಕೆಯ ಒಡವೆಗಳನ್ನೆಲ್ಲಾ ಡವಿಟ್ಟು ಲಕ್ಷ ಲಕ್ಷ ಣ ಪಡೆದಿದ್ದ.. ಆದ್ರೆ ನಾಲ್ಕು ತಿಂಗಳ ನಂತರ ಬಸಮ್ಮ ತನ್ನ ಒಡವೆಯನ್ನ ವಾಪಸ್​​ ಕೇಳ್ತಾಳೆ.. ಆದ್ರೆ ಈತನಿಗೆ ಮಾತ್ರ ವಾಪಸ್​ ಕೊಡೋದಕ್ಕೆ ಮನಸ್ಸಾಗೋದಿಲ್ಲ.. ಆಕೆಯನ್ನೇ ಮುಗಿಸಿಬಿಟ್ರೆ ಒಡವೆಯೂ ಉಳಿಯುತ್ತೆ. ಆಕೆಯ ಕಾಟವೂ ಇರೋದಿಲ್ಲ ಅಂತ ತಿಳಿದು ಆಕೆಯನ್ನೇ ಮುಗಿಸೋದಕ್ಕೆ ನಿರ್ಧರಿಸಿಬಿಡ್ತಾನೆ.. ಪಕ್ಕಾ ಪ್ಲಾನ್​ ಮಾಡಿಕೊಂಡು ದೇವಸ್ಥಾನಕ್ಕೆ ಹೋಗೋಣ ಅಂತ ಹೇಳಿ ಆಕೆಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಹೋಗ್ತಾನೆ.. ಹೋಗುವಾಗ ಪೆಟ್ರೋಲ್​​ ಕೂಡ ಖರೀದಿಸಿ ತೆಗೆದುಕೊಂಡು ಹೋಗ್ತಾನೆ.. ಇವನನ್ನ ನಂಬಿ ಹೋದ ಬಸಮ್ಮ ಹೆಣವಾಗಿ ಹೋಗ್ತಾಳೆ.

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.

21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more