ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

Published : Jul 31, 2024, 01:06 PM ISTUpdated : Jul 31, 2024, 01:10 PM IST

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.
 

ಕಲಬುರಗಿ(ಜು.31):   ಆಕೆ 68 ವರ್ಷದ ಅಜ್ಜಿ... ತನ್ನವರು ಅಂತ ಯಾರೂ ಇಲ್ಲ.. ಆದ್ರೂ ತನ್ನ ಏರಿಯದಲ್ಲಿರೋರಿಗೆಲ್ಲಾ ಬಡ್ಡಿಗೆ ದುಡ್ಡು ಕೊಡ್ತಿದ್ದಳು.. ಕಷ್ಟ ಅಂತ ಬಂದ್ರೆ ಹಿಂದೆ ಮುಂದೆ ನೋಡದೇ ಸಾಲ ಕೊಡ್ತಿದ್ದಳು. ಅಂಥಹ ಅಜ್ಜಿ ಆವತ್ತು ಇದ್ದಕ್ಕಿದ್ದಂತೆ ಮಿಸ್ಸಿಂಗ್​​​​.. ಎಲ್ಲಿ ಹುಡುಕಿದ್ರೂ ಅವಳ ಸುಳಿವು ಸಿಕ್ಕಿರಲಿಲ್ಲ.. ಪರಿಸ್ಥಿತಿ ಹೀಗಿರವಾಗ್ಲೇ ಆಕೆಯ ಸಾವಿನ ಸುದ್ದಿ ಬಂದಿತ್ತು.. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಬೆಂಕಿ ಹಾಕಿ ಸುಟ್ಟುಬಿಟ್ಟಿದ್ದ.. ಒಂದೇ ಒಂದು ಕ್ಲೂ ಆ ಮರ್ಡರ್​ ಕೇಸ್​ನಲ್ಲಿ ಪೊಲೀಸರಿಗೆ ಸಿಕ್ಕಿರಲಿಲ್ಲ.. ಆದ್ರೆ ಛಲಬಿಡದ ಪೊಲೀಸರು ಕೊನೆಗೂ ಹಂತಕನ ಹೆಡೆಮುರಿ ಕಟ್ಟಿದ್ದಾರೆ.. ಹಾಗಾದ್ರೆ ಅಜ್ಜಿಯನ್ನ ಕೊಂದಿದ್ಯಾರು..? ಬಡ್ಡಿ ಬಸ್ಸಮ್ಮಳ ಕೊಲೆಯ ಹಿಂದಿನ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಊರಿನವಿರಿಗೆಲ್ಲಾ ಬಡ್ಡಿಗೆ ದುಡ್ಡು ಕೊಟ್ರೂ.. ಈಕೆ ಮಾತ್ರ ಬೀದಿಯಲ್ಲಿ ಜೀವನ ಮಾಡ್ತಿದ್ದಳು.. ಆದ್ರೆ ಆವತ್ತೊಂದು ದಿನ ಇದ್ದಕಿದ್ದಾಗೆ ಬಸಮ್ಮ ಹೆಣವಾಗಿ ಬಿಡ್ತಾಳೆ.. ಹಂತಕ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿ ನಂತರ ಪೆಟ್ರೋಲ್​ ಹಾಕಿ ಸುಟ್ಟುಬಿಟ್ಟಿರುತ್ತಾನೆ.

ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ಬಡ್ಡಿಗೆ ದುಡ್ಡು ಕೊಡ್ತಿದ್ದ ಬಸಮ್ಮ ಅವನೊಬ್ಬನಿಗೆ ತನ್ನ ಬಳಿ ಇದ್ದ ಒಡವೆಯನ್ನೇ ಕೊಟ್ಟು ಬಿಟ್ಟಿದ್ಲು.. ಆತ ಆಕೆಯ ಒಡವೆಗಳನ್ನೆಲ್ಲಾ ಡವಿಟ್ಟು ಲಕ್ಷ ಲಕ್ಷ ಣ ಪಡೆದಿದ್ದ.. ಆದ್ರೆ ನಾಲ್ಕು ತಿಂಗಳ ನಂತರ ಬಸಮ್ಮ ತನ್ನ ಒಡವೆಯನ್ನ ವಾಪಸ್​​ ಕೇಳ್ತಾಳೆ.. ಆದ್ರೆ ಈತನಿಗೆ ಮಾತ್ರ ವಾಪಸ್​ ಕೊಡೋದಕ್ಕೆ ಮನಸ್ಸಾಗೋದಿಲ್ಲ.. ಆಕೆಯನ್ನೇ ಮುಗಿಸಿಬಿಟ್ರೆ ಒಡವೆಯೂ ಉಳಿಯುತ್ತೆ. ಆಕೆಯ ಕಾಟವೂ ಇರೋದಿಲ್ಲ ಅಂತ ತಿಳಿದು ಆಕೆಯನ್ನೇ ಮುಗಿಸೋದಕ್ಕೆ ನಿರ್ಧರಿಸಿಬಿಡ್ತಾನೆ.. ಪಕ್ಕಾ ಪ್ಲಾನ್​ ಮಾಡಿಕೊಂಡು ದೇವಸ್ಥಾನಕ್ಕೆ ಹೋಗೋಣ ಅಂತ ಹೇಳಿ ಆಕೆಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಹೋಗ್ತಾನೆ.. ಹೋಗುವಾಗ ಪೆಟ್ರೋಲ್​​ ಕೂಡ ಖರೀದಿಸಿ ತೆಗೆದುಕೊಂಡು ಹೋಗ್ತಾನೆ.. ಇವನನ್ನ ನಂಬಿ ಹೋದ ಬಸಮ್ಮ ಹೆಣವಾಗಿ ಹೋಗ್ತಾಳೆ.

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more