ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನನ್ನೇ ಕೊಂದ್ರು: ರೈಲ್ವೆ ಹಳಿ ಮೇಲೆ ಶವ ಎಸೆಯಲು ಬಂದು ತಗ್ಲಾಕೊಂಡ್ರು!

Oct 20, 2022, 3:15 PM IST

ಹಾಸನ (ಅ. 20): ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನೋ ಮಾತಿದೆ. ಇವತ್ತಿನ ಎಪಿಸೋಡ್ ಆ ಮಾತಿಗೆ ಸಾಕ್ಷಿಯಂಬಂತೆ ಇದೆ. ಜೊತೆಯಲ್ಲಿ ಕೆಲಸ ಮಾಡುವ ಹುಡುಗನ ಕಥೆ ಮುಗಿಸಿದ ಅದೊಂದು ಗ್ಯಾಂಗ್ ಅದರಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಒಂದನ್ನ ಮಾಡಿತ್ತು. ಸ್ನೇಹಿತನನ್ನೇ ಕೊಂದು ರೈಲ್ವೆ ಹಳಿ ಮೇಲೆ ಬಿಸಾಕಿ ಆ್ಯಕ್ಸಿಡೆಂಟ್ ಎಂದು ಬಿಂಬಿಸಲು ತಯಾರಿ ನಡೆಸಿದ್ದ ಹಂತಕರಿಗೆ ಆ ದೈವವೆ ಒಂದು ಶಾಕ್ ಕೊಟ್ಟಿದೆ. ಫೇಕ್ ಆ್ಯಕ್ಸಿಡೆಂಟ್ ಪ್ಲಾನ್ ಹಾಕೊಂಡು ಬಂದಿದ್ದವರಿಗೆ ರಿಯಲ್ ಆ್ಯಕ್ಸಿಡೆಂಟ್ ಆಗಿದೆ. ಪರಿಣಾಮ ಅವರು ಮಾಡಿದ್ದ ಕೊಲೆಯ ರಹಸ್ಯ ಬಟಬಯಲಾಗಿದೆ. ಹೀಗೆ ಜೊತೆಯಲಿದ್ದವನ್ನೇ ಮುಗಿಸಿ ಅದರಿಂದ ಎಸ್ಕೇಪಾಗಲು ಹೊರಿಟಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ಕೈಗೆ ತಗ್ಲಾಕೊಂಡ ರೋಚಕ ಕಹನಿಯೇ ಇವತ್ತಿನ ಎಫ್.ಐ.ಆರ್ 

ಸ್ವಂತ ಬಾವನ ಕತ್ತು ಸೀಳಿದ ಕಿರಾತಕರು: ಅಕ್ಕನ ಕಣ್ಣೆದುರೇ ಕೊಲೆ ಮಾಡಿದ್ದೇಕೆ?