ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್​ ಮಾಡಿದ್ದ!

ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್​ ಮಾಡಿದ್ದ!

Published : Sep 20, 2025, 02:05 PM IST

ಅವರಿಬ್ಬರು ಮದುವೆಯಾಗಿ ಎರಡುವರೆ ವರ್ಷವಾಗಿದೆ ಅಷ್ಟೇ.. ಒಂದು ಮುದ್ದಾದ ಹೆಣ್ಣುಮಗು ಕೂಡ ಇದೆ.. ಆದ್ರೆ ವರ್ಷದ ಹಿಂದೆ ಗಂಡ ಟಾರ್ಚರ್​​ ಕೊಡ್ತಾನೆ ಅಂತ ಹೆಂಡತಿ ಗಂಡ ಮತ್ತು ಮಗುವನ್ನ ಬಿಟ್ಟು ತವರು ಮನೆ ಸೇರಿದ್ಲು.

ಅವರಿಬ್ಬರು ಮದುವೆಯಾಗಿ ಎರಡುವರೆ ವರ್ಷವಾಗಿದೆ ಅಷ್ಟೇ.. ಒಂದು ಮುದ್ದಾದ ಹೆಣ್ಣುಮಗು ಕೂಡ ಇದೆ.. ಆದ್ರೆ ವರ್ಷದ ಹಿಂದೆ ಗಂಡ ಟಾರ್ಚರ್​​ ಕೊಡ್ತಾನೆ ಅಂತ ಹೆಂಡತಿ ಗಂಡ ಮತ್ತು ಮಗುವನ್ನ ಬಿಟ್ಟು ತವರು ಮನೆ ಸೇರಿದ್ಲು. ಗಂಡ ಕೆಲಸವನ್ನೂ ಮಾಡಿಕೊಂಡು ಮಗುವನ್ನೂ ನೋಡಿಕೊಳ್ತಿದ್ದ.. ಆದ್ರೆ ಮೊನ್ನೆ ಇದ್ದಕ್ಕಿದ್ದಂತೆ ಆತ ಮಚ್ಚು ಹಿಡಿದು ಹೆಂಡತಿ ಮನೆ ಎದುರು ಬಂದು ನಿಂತಿದ್ದ.. ಇವತ್ತು ಏನೇ ಆಗಲಿ ಹೆಂಡತಿಯನ್ನ ಕತ್ತರಿಸಬೇಕು ಅಂತ ಅಂದುಕೊಂಡಿದ್ದ.. ಆದ್ರೆ ಅಷ್ಟರಲ್ಲೇ ಪೊಲೀಸರು ಸ್ಪಾಟ್​ಗೆ ಬಂದು ಆತನನ್ನ ಅರೆಸ್ಟ್​ ಮಾಡಿದ್ರು.. ಬಟ್​​ ಆತ ಹೆಂಡತಿಯನ್ನ ಮುಗಿಸಲು ಬರುವ ಮೊದಲೇ ಒಂದು ಹೆಣ ಹಾಕಿ ಬಂದಿದ್ದ..

ಅಷ್ಟಕ್ಕೂ ಆತ ಕೊಂದಿದ್ದು ಯಾರನ್ನ..? ಹೆಂಡತಿಯನ್ನೇ ಮುಗಿಸೋ ನಿರ್ಧಾರ ಮಾಡಿದ್ದೇಕೆ..? ಒಂದು ಡೆಡ್ಲಿ ಮರ್ಡರ್​​ ಹಿಂದಿನ ಕಹನಿಯೇ ಇವತ್ತಿನ ಎಫ್​​ಐಆರ್​​. ಅಷ್ಟೇ ಅಲ್ಲಿಗೆ ಮಹಾಂತೇಶನ ಕಥೆ ಮುಗಿಯುತ್ತೆ... ಆದ್ರೆ ಇಷ್ಟಕ್ಕೇ ಬಸವರಾಜನ ದ್ವೇಷದ ಕಿಚ್ಚು ಹಾರೋದಿಲ್ಲ.. ಆತನ ತಲೆಗೆ ಮತ್ತೊಂದು ಮರ್ಡರ್​​ ಮಾಡೊ ಯೋಚನೆ ಬಂದುಬಿಡುತ್ತೆ. ಅದು ಯಾರದ್ದು ಗೊತ್ತಾ..? ತಾನು ತಾಳಿ ಕಟ್ಟಿದ ಹೆಂಡತಿಯದ್ದು.. ಹಾಗಾದ್ರೆ ಅವಳ ಕಥೆಯನ್ನೂ ಬಸವರಾಜ ಮುಗಿಸಿಬಿಟ್ಟನಾ..? ಮಹಾಂತೇಶ ಮರ್ಡರ್​ ಆದ ಮೇಲೆ ಅಲ್ಲಿ ಏನೇನಾಯ್ತು..? ಪೊಲೀಸರ ತನಿಖೆ ಹೇಗಿತ್ತು..? ಊರಿನವರ ಮಾತು ಕೇಳಿಕೊಂಡು ಮಹಾಂತಶನ ವಿರುದ್ಧ ಹಾಕಿದ್ದ ಕೇಸನ್ನ ಬಸವರಾಜ ವಾಪಸ್​​​ ತಗೆದುಕೊಂಡಿದ್ದ..

ಆದ್ರೆ ನಂತರ ಹೆಂಡತಿ ದೂರವಾಗ್ತಾಳೆ.. ಮತ್ತೆ ಮಹಾಂತೇಶನ ಸಹವಾಸ ಮಾಡ್ತಾಳೆ.. ಇದು ಬಸವರಾಜನ ಪಿತ್ತ ನೆತ್ತಿಗೇರುತ್ತೆ.. ಮಹಾಂತೇಶನಿಗೆ ಮುಹೂರ್ತ ಇಟ್ಟೇಬಿಡ್ತಾನೆ.. ಪಕ್ಕಾ ಪ್ಲಾನ್​ ಮಾಡಿ ಅವನನ್ನ ಎತ್ತೇಬಿಡ್ತಾನೆ.. ಆದರೆ ಬಳಿಕ ಹೆಂಡತಿಯನ್ನೂ ಮುಗಿಸಿಬಿಡೋ ತೀರ್ಮಾನ ಮಾಡಿ ಆಕೆಯ ಮನೆ ಬಳಿ ಹೋಗ್ತಾನೆ.. ಆದ್ರೆ ಇನ್ನೇನು ಹೆಂಡತಿಯ ಕಥೆ ಮುಗಿಸಬೇಕು ಅಷ್ಟರಲ್ಲೇ ಪೊಲೀಸರು ಅವನ ಎದುರು ಹೋಗಿ ನಿಲ್ತಾರೆ. ಮಹಾಂತೇಶ ತಪ್ಪು ಮಾಡಿರಬಹುದು, ಆದರೆ ಕೊಲೆ ಮಾಡುವ ಹಂತಕ್ಕೆ ಬಸವರಾಜ್ ಹೋಗಬಾರದಿತ್ತು.. ಅನೈತಿಕ ಸಂಬಂಧದ ಜ್ವಾಲೆ ಇದೀಗ ಎರಡು ಕುಟುಂಬಗಳನ್ನೇ ಬಲಿ ಪಡೆದಿವೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more