ಬಡವರಿಗೆ ಕೇರಳದ ಕಂಪನಿಯಿಂದ ಪಂಗನಾಮ.. ಬಡ್ಡಿ ಆಸೆಯಲ್ಲಿದ್ದ ಕಾರ್ಮಿಕರಿಗೆ ಅಸಲೂ ಹೋಯ್ತು..!

ಬಡವರಿಗೆ ಕೇರಳದ ಕಂಪನಿಯಿಂದ ಪಂಗನಾಮ.. ಬಡ್ಡಿ ಆಸೆಯಲ್ಲಿದ್ದ ಕಾರ್ಮಿಕರಿಗೆ ಅಸಲೂ ಹೋಯ್ತು..!

Published : Dec 10, 2023, 10:39 AM IST

ದೇಶದಲ್ಲಿ ಸುಮಾರು 85 ಶಾಖೆ ಹೊಂದಿರೋ ಕೇರಳ ಮೂಲದ ಫೈನಾನ್ಸ್ ಕಂಪೆನಿ. ಸದ್ಯ ಕೆಲ ದಿನಗಳಿಂದ ಫೈನಾನ್ಸ್ ಬಾಗಿಲು ಹಾಕಿದ್ದು, ಬಡವರು ಫೈನಾನ್ಸ್ ಬಾಗಿಲು ಓಪನ್ ಆಗುತ್ತಾ ಅಂತ ಕಾಯುತ್ತಿದ್ದಾರೆ. ಕೂಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ  ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿದ್ದವರು ಇದೀಗ ಬೀದಿಗೆ ಇಳಿದ್ದಿದ್ದಾರೆ.

ನಮಗೆ ನ್ಯಾಯ ಕೊಡಿ ಅಂತ ಅಂಗಲಾಚುತ್ತಿರೋ ಇವರೆಲ್ಲಾ ಬಡ ಕೂಲಿ ಕಾರ್ಮಿಕರು. ಹಳ್ಳಿಗಳಿಂದ ಮಂಗಳೂರಿಗೆ(Mangalore) ಬಂದು ಕೂಲಿ ನಾಲಿ ಮಾಡಿ ಬದುಕು ಕಟ್ಟಿಕೊಂಡವರು. ಸಂಪಾದನೆ ಮಾಡಿದ್ರಲ್ಲಿ ಒಂದಿಷ್ಟು ಉಳಿಸಬೇಕೆಂದು ರಾಷ್ಟ್ರೀಕೃತ್ ಬ್ಯಾಂಕ್ ಬಿಟ್ಟು ಫೈನಾನ್ಸ್ ಕಂಪೆನಿಯಲ್ಲಿ(Finance Company) ಹೂಡಿಕೆ ಮಾಡಿದ್ರು. ಆದ್ರೆ ಸದ್ಯ ಇವರಿಗೆ ಬಡ್ಡಿ ಸಿಗೋದಿರಲಿ ಹಾಕಿರೋ ಅಸಲು ಹಣ ಸಿಗೋದೇ ಡೌಟ್ ಆಗಿದೆ. ಯಾಕಂದ್ರೆ ಇವರು ಹೂಡಿಕೆ ಮಾಡಿರೋ ರಾಯಲ್ ಟ್ರಾವಂಕೂರ್ ಅನ್ನೋ ಫೈನಾನ್ಸ್ ಕಂಪೆನಿ ಸದ್ದಿಲ್ಲದೆ ಬಾಗಿಲು ಹಾಕಿದ್ದಾರೆ. ರಾಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ(Royal Travancore Farmers Producer Company) ಅನ್ನೋ ಫೈನಾನ್ಸ್ ಕಂಪೆನಿ ಸದ್ಯ ಮಂಗಳೂರಿನ ಒಂದು ಬ್ರಾಂಚ್ನಲ್ಲೇ ಸರಿ ಸುಮಾರು 65 ಲಕ್ಷ ವಂಚನೆ ಮಾಡಿದೆ . ಕೇರಳ ಮೂಲದ ಈ ಫೈನಾನ್ಸ್ ಕಂಪೆನಿ ಬಡವರನ್ನೇ ಟಾರ್ಗೆಟ್ ಮಾಡಿ ಹೆಚ್ಚಿನ ಬಡ್ಡಿಯ ಆಮಿಷ ನೀಡಿತ್ತು. ಹೀಗಾಗಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ಇಲ್ಲಿ ಹಣ ಹೂಡಿಕೆ ಮಾಡಿ ಈಗ ಕೈ ಸುಟ್ಟುಕೊಂಡಿದ್ದಾರೆ. ರಾಯಲ್ ಟ್ರವಾಂಕೂರ್ ಫೈನಾನ್ಸ್ ಕಂಪೆನಿ ದೇಶದ ಎಲ್ಲೆಡೆ ಸುಮಾರು 85 ಬ್ರಾಂಚ್ ಹೊಂದಿದೆ. ಕರ್ನಾಟಕದ ಹಲವೆಡೆ ಈ ಫೈನಾನ್ಸ್ ಕಂಪೆನಿ  ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸ್ತಿದೆ. ಸದ್ಯ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಈ ಫೈನಾನ್ಸ್ ಕಂಪೆನಿ ತನ್ನ ಕಚೇರಿಯನ್ನು ಬಂದ್ ಮಾಡಿದ್ದು, ಸಿಬ್ಬಂದಿ ಸದ್ದಿಲ್ಲದ್ದೇ ಪರಾರಿಯಾಗಿದ್ದಾರೆ. ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಹಾಗೂ ಒಂದಿಷ್ಟು ಅಂಗಡಿಯವರು ಈ ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಸರ್ಕಾರ ನಮ್ಮ ಹಣ ವಾಪಾಸ್ ಹಿಂದಿರುಗಿಸುವಂತೆ ಮಾಡಬೇಕೆಂದು ಗೋಳಾಡ್ತಿದ್ದಾರೆ. ಫೈನಾನ್ಸ್ ಬಂದ್ ಆಗಲಿದೆ ಅನ್ನೋ ಸೂಚನೆ ಸಿಕ್ಕಾಗಲೇ ಜಿಲ್ಲಾಧಿಕಾರಿಗಳಿಗೂ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  Weekly Horoscope: ಕರ್ಕಟಕ ರಾಶಿಯವರಿಗೆ ಈ ವಾರ ಮಾನಸಿಕ ಖಿನ್ನತೆ ಕಾಡಲಿದ್ದು, ಪರಿಹಾರಕ್ಕೆ ಏನು ಮಾಡಬೇಕು ?

23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
Read more