ಅನ್ನ ಕೊಟ್ಟವಳ ಕತ್ತು ಸೀಳಿದ ಕಾರ್ ಡ್ರೈವರ್..! ಕೊಲೆ ಮಾಡಿ ತಪ್ಪು ಕಾಣಿಕೆ ಹಾಕಿದ್ದ ಹಂತಕ..!

Nov 7, 2023, 3:57 PM IST

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಖಡಕ್ ಆಫೀಸರ್ ಅಂತಲೇ ಹೆಸರು ಮಾಡಿದ್ದ ಪ್ರತಿಮಾ ಕೊಲೆ(Murder) ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಖಡಕ್ ಲೇಡಿ ತನ್ನ ಮನೆಯಲ್ಲೇ ಬರ್ಬರವಾಗಿ ಕೊಲೆಯಾಗಿ ಹೋದಾಗ ಆ ಕೊಲೆಗೆ ನಾನಾ ಕಾರಣಗಳು ಕೇಳಿ ಬಂದಿತ್ತು. ಅಂತೆ ಕಂತೆಗಳು ಹುಟ್ಟಿಕೊಂಡಿದ್ವು. ಆದ್ರೆ ತನಿಖೆ ನಡೆಸುತ್ತಿದ್ದ ಪೊಲೀಸರು(police) ಕೊನೆಗೂ ಕೊಲೆಗಾರನ ಹೆಡೆಮುರಿ ಕಟ್ಟಿದ್ದಾರೆ. ಪ್ರತಿಮಾ(Pratima) ಕಥೆ ಮುಗಿಸಿ ದೇವರಿಗೆ ತಪ್ಪು ಕಾಣಿಕೆ ಹಾಕಲು ಹೊರಟವನಿಗೆ ಜೈಲಿನ ದರ್ಶನ ಮಾಡಿಸಿದ್ದಾರೆ ಪೊಲೀಸರು. ಯಾವಾಗ ಪ್ರತಿಮಾರ ಮಾಜಿ ಕಾರ್ ಡ್ರೈವರ್ ಫೋನ್ ಸ್ವಿಚ್ ಆಫ್ ಅಂತ ಬಂತೋ ಪೊಲೀಸರಿಗೆ ಅವನೇ ಕೊಲೆಗಾರ ಅನ್ನೋದು ಕನ್ಫರ್ಮ್ ಆಗುತ್ತೆ. ಆದ್ರೆ ಆತ ಮಾತ್ರ ನಾಟ್ ರೀಚಬಲ್.ಆದ್ರೂ ಬೆಂಬಿಡದ ಪೊಲೀಸರು ಅವನನ್ನ ಕೊನೆಗೂ ಅರೆಸ್ಟ್ ಮಾಡಿದ್ದಾರೆ. ಅವನು ಪ್ರತಿಮಾರ ಬಳಿ 4 ವರ್ಷದಿಂದ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಆದ್ರೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ರೂ ಎಲ್ಲರ ಬಳಿ ಸರ್ಕಾರಿ ಕೆಲಸದಲ್ಲಿ ಇರೋದಾಗಿ ಹೆಳಿಕೊಂಡಿದ್ದ. ಇನ್ನೂ ಹೆಂಡತಿಗೂ ಇದೇ ರೀತಿ ಹೇಳಿ ನಂಬಿಸಿದ್ದ. ಆದ್ರೆ ಇಷ್ಟಕ್ಕೆ ಕಿರಣ ಸುಮ್ಮನ್ನಾಗಿದ್ದಿದ್ರೆ ಏನೂ ಆಗ್ತಿರಲಿಲ್ಲ. ಪ್ರತಿಮಾರ ಕೆಲಸಗಳಲ್ಲೂ ಮೂಗು ತೂರಿಸುತ್ತಿದ್ದ. ಇಲಾಖೆಯ ಮಾಹಿತಿಗಳನ್ನ ಲೀಕ್ ಮಾಡ್ತಿದ್ದ. ಇದರ ಬಗ್ಗೆ ಗೊತ್ತಾದ ಪ್ರತಿಮಾ ಆತನಿಗೆ ವಾರ್ನಿಂಗ್ ಕೂಡ ಕೊಟ್ಟಿದ್ರು. ಆದ್ರೆ ಇದ್ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳದ ಕಿರಣ ಮಾತ್ರ ತನ್ನ ಆಟಗಳನ್ನ ಮುಂದುವರೆಸಿದ್ದ. ಆದ್ರೆ ಆವತ್ತೊಂದು ದಿನ ಪ್ರತಿಮಾ ತಾಳ್ಮೆಯ ಕಟ್ಟೆ ಹೊಡೆದಿತ್ತು. ಕಿರಣನನ್ನ ಕೆಲಸದಿಂದ ಕಿತ್ತು ಹಾಕಿದ್ರು. ಅಷ್ಟೇ ಆವತ್ತೇ ಕಿರಣ ಸೇಡಿನ ಶಪಥ ಮಾಡಿದ್ದ. ಸದ್ಯ ಕಿರಣ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ.. ಈಗ ಆತ ಕೆಲಸದಿಂದ ತೆಗೆದಿದ್ದಕ್ಕೇ ಕೊಲೆ ಮಾಡಿದ್ದೀನಿ ಅಂತ ಹೆಳಿಕೊಂಡಿದ್ದಾನೆ. ಆದ್ರೆ ಕೇವಲ ಇದೊಂದೇ ವಿಷ್ಯಕ್ಕೆ ಆತ ಕೊಲೆ ಮಾಡಿರೋದಕ್ಕೆ ಸಾಧ್ಯವಿಲ್ಲ ಅಂತಿದ್ದಾರೆ ಪೊಲೀಸರು. ಇದೇ ಕಾರಣಕ್ಕೆ ಪೊಲೀಸರು 10 ದಿನ ತಮ್ಮ ಕಸ್ಟಡಿಗೆ ಕಿರಣನನ್ನ ಪಡೆದುಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೋದಿ Vs ಸಿದ್ದು ಕಾಳಗ: ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲವೆಂದ ಪ್ರಧಾನಿ