Rameshwaram Cafe Blast: ರಾಮೇಶ್ವರಂ ಕೆಫೆಯ ರಾಷ್ಟ್ರಭಕ್ತಿಯೇ ಬಾಂಬ್ ಬ್ಲಾಸ್ಟ್‌ಗೆ ಕಾರಣವಾ..?

Mar 4, 2024, 12:41 PM IST

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ(Rameshwaram cafe blast) ಹಿಂದಿನ ಕಾರಣ ಏನು ಎಂಬುದು ಇದೀಗ ಎಲ್ಲಾರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಪ್ರತಿಷ್ಠಿತ ಕೆಫೆಯಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ಯಾಕೆ ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಕೆಫೆ ಆರಂಭದ ದಿನದಿಂದಲೂ ನಿತ್ಯವೂ ಸಿಬ್ಬಂದಿಯಿಂದ ರಾಷ್ಟ್ರಗೀತೆ (National Anthem) ಹಾಡಲಾಗುತ್ತಿತ್ತಂತೆ. ಕೆಫೆಯಲ್ಲಿ ರಾಷ್ಟ್ರಗೀತೆ ಹಾಡಿದ ನಂತರವೇ ಕೆಲಸವನ್ನು ಸಿಬ್ಬಂದಿ ಆರಂಭಿಸುತ್ತಿದ್ದರು. ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ರಾಷ್ಟ್ರಗೀತೆ ಹಾಡುತ್ತಿದ್ದ ಕೆಫೆಯ ಸಿಬ್ಬಂದಿ. ಅಲ್ಲದೇ ರಾಷ್ಟ್ರೀಯ ಹಬ್ಬಗಳೆಲ್ಲವನ್ನೂ ಆಚರಣೆ ಮಾಡುತ್ತಿದ್ದರು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದ ಕೆಫೆ ಮಾಲೀಕರು. ರಾಮೇಶ್ವರಂ ಕೆಫೆಯ ಅತಿಯಾದ ರಾಷ್ಟ್ರ ಭಕ್ತಿಯೇ ಉಗ್ರ ಕೃತ್ಯಕ್ಕೆ ಕಾರಣವಾ ಎಂಬ ಪ್ರಶ್ನೆ ಸಹ ಇದೀಗ ಕಾಡತೊಡಗಿದೆ.

ಇದನ್ನೂ ವೀಕ್ಷಿಸಿ:  Karataka Damanaka movie: ಕನ್ನಡ ಸಿನಿ ಪ್ರೇಕ್ಷಕರಿಗಾಗಿ ಸಿದ್ಧವಾಗಿದೆ ಪ್ರಭುದೇವಾ-ನಿಶ್ವಿಕಾ ಡ್ಯಾನ್ಸ್‌ ಹಬ್ಬ..!