ಆಂಟಿಗೆ ಮೆಸೇಜ್ ಮಾಡಿದವನು ಹೆಣವಾದ..! ಸಂಜೆ ರಾಜಿ ಪಂಚಾಯ್ತಿ.. ರಾತ್ರಿ ಮರ್ಡರ್..!

ಆಂಟಿಗೆ ಮೆಸೇಜ್ ಮಾಡಿದವನು ಹೆಣವಾದ..! ಸಂಜೆ ರಾಜಿ ಪಂಚಾಯ್ತಿ.. ರಾತ್ರಿ ಮರ್ಡರ್..!

Published : Sep 05, 2023, 02:24 PM IST

ಅವನ ಸೇಡಿಗಾಗಿ ಗೆಳೆಯನನ್ನೇ ಕೊಂದುಬಿಟ್ಟ..!
ರಾತ್ರಿ ಮನೆ ಬಿಟ್ಟವನು ಬೆಳಗ್ಗೆ ಸಿಕ್ಕಿದ್ದು ಹೆಣವಾಗಿ..!
ಕತ್ತು ಕೊಯ್ದು ಯುವಕನ ಕೊಲೆ ಮಾಡಿದ ಹಂತಕರು 

ಅವನು ಇನ್ನೂ 23 ವರ್ಷದ ಯುವಕ. ಓದನ್ನ ಅರ್ಧಕ್ಕೆ ನಿಲ್ಲಿಸಿ ಹೆತ್ತವರಿಗೆ ಸಹಾಯವಾಗ್ಲಿ ಅಂತ ಟ್ರ್ಯಾಕ್ಟರ್ ಡ್ರೈವಿಂಗ್ ಮಾಡಿಕೊಂಡು ಚೂರು ಪಾರು ಹಣ ಸಂಪಾದಿಸುತ್ತಿದ್ದ. ಆದರೆ ಹೀಗೆ ತನ್ನ ಪಾಡಿಗೆ ತಾನಿದ್ದವನು ಆವತ್ತು ಇದ್ದಕಿದ್ದಂತೆ ಹೆಣವಾಗಿದ್ದ. ಅವನ ಶವ ಕಾವೇರಿ ನಾಲೆಯಲ್ಲಿ ಸಿಕ್ಕಿತ್ತು. ಅವನನ್ನ ಹಂತಕರು ಕತ್ತು ಕೊಯ್ದು ಕೊಲೆ(Murder) ಮಾಡಿದ್ರು. ಆದ್ರೆ ಇದೇ ಕೇಸ್‌ನ ತನಿಖೆಗಿಳಿದ ಪೊಲೀಸರಿಗೆ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಆ್ಯಂಡ್ ಟರ್ನ್. ಯಾವಾಗ ಭಾನುಪ್ರಕಾಶನ ಹೆಣ ಸಿಗ್ತೋ ಕೆಲವೇ ನಿಮಷಗಳಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷನ್ನಾಗಿದ್ದ ಎನ್.ಸಿ ಪ್ರಕಾಶ ಮತ್ತು ಆತನ ಹುಡುಗರನ್ನ ಪೊಲೀಸರು (police) ಲಾಕ್ ಮಾಡಿದ್ರು. ವಿಚಾರಣೆ ಆರಂಭಿಸಿದ್ರು. ಆದರೆ ಅವರನ್ನ ಎತ್ತಾಕೊಂಡು ಬರಲು ಕಾರಣವೂ ಇತ್ತು. ಅದೇನಂದ್ರೆ ಭಾನುಪ್ರಕಾಶನ ಶವ ಸಿಕ್ಕ ಹಿಂದಿನ ರಾತ್ರಿಯಷ್ಟೇ ಎನ್.ಸಿ ಪ್ರಕಾಶ ಮತ್ತು ಭಾನುಪ್ರಕಾಶನ ನಡುವೆ ಮಾರಾಮಾರಿ ನಡೆದಿತ್ತು. ಅಷ್ಟೇ ಅಲ್ಲ ರಾಜಿ ಪಂಚಾಯ್ತಿ ನಡೆದು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಸಂಜೆ ಗಲಾಟೆ ಮತ್ತು ರಾಜಿ ಪಂಚಾಯ್ತಿ.. ಬೆಳಗ್ಗೆ ಮರ್ಡರ್ ಅಂದರೆ ಕೊಲೆ ಮಾಡಿದವರು ಹಿಂದಿನ ರಾತ್ರಿ ಗಲಾಟೆ ಮಾಡಿದವರೇ ಅಂತನ್ನಿಸಿಬಿಡುತ್ತೆ. ಅದು ಪೊಲೀಸರಿಗೂ ಅನಿಸಿತ್ತು. ಇದೇ ಕಾರಣಕ್ಕೆ ಅವರನ್ನೆಲ್ಲಾ ಎತ್ತಾಕೊಂಡು ಬಂದಿದ್ರು. ಆದ್ರೆ ವಿಚಾರಣೆ ಮಾಡಿದಾಗ ಗೊತ್ತಾಗಿದ್ದು ಅವರು ಕೊಲೆಗಾರರು ಅಲ್ಲ ಅಂತ. ಸ್ನೇಹ, ಗೆಳತನ ಅನ್ನೋದು ಪವಿತ್ರವಾದ ಸಂಬಂಧ ಅಂತಾರೆ. ಕಷ್ಟದಲ್ಲಿದ್ದಾಗ ಬಂಧು ಬಳಗ ಕೈ ಬಿಟ್ಟರೂ ಗೆಳೆತನ ಕೈ ಹಿಡಿಯುತ್ತೆ ಅನ್ನುವ ವಿಶ್ವಾಸದಲ್ಲಿ ಜನರು ಇರುತ್ತಾರೆ. ಆದ್ರೆ ಇಲ್ಲೊಬ್ಬ ಪಾಪಿ ಬೇರೋಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಒಂದೇ ತಟ್ಟೆಯಲ್ಲಿ ಅನ್ನ ತಿಂದ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಹೌದು, ಭಾನುಪ್ರಕಾಶ ಕೊಲೆಯಾಗಿದ್ದು ಎನ್. ಸಿ ಪ್ಕಾಶನಿಂದ ಅಲ್ಲ ಬದಲಿಗೆ ತನ್ನ ಪ್ರಾಣ ಸ್ನೇಹಿತನಿಂದಲೇ. ಆದ್ರೆ ಗೆಳೆಯನ ಹೆಣ ಹಾಕಿ ಇನ್ನಿಲ್ಲದಂತೆ ನಾಟಕವಾಡಿದ್ದ ಆ ಕಿರಾತಕ ಫ್ರೆಂಡ್ ಕೊನೆಗೂ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ.

ಇದನ್ನೂ ವೀಕ್ಷಿಸಿ:  ಧರ್ಮ ವಿರೋಧಿ ನೀತಿಯ ಬಗ್ಗೆ I.N.D.I.A ಮೈತ್ರಿಕೂಟದ ನಿಲುವೇನು..?

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more