ಗಂಡ ಜೈಲಿಗೆ.. ಹೆಂಡತಿ ಪರಲೋಕಕ್ಕೆ..ಮಕ್ಕಳು ಅನಾಥ..! ಪ್ರೀತಿಸಿದವಳನ್ನು ಪತಿರಾಯ ಕೊಂದಿದ್ದೇಕೆ ?

ಗಂಡ ಜೈಲಿಗೆ.. ಹೆಂಡತಿ ಪರಲೋಕಕ್ಕೆ..ಮಕ್ಕಳು ಅನಾಥ..! ಪ್ರೀತಿಸಿದವಳನ್ನು ಪತಿರಾಯ ಕೊಂದಿದ್ದೇಕೆ ?

Published : Nov 26, 2023, 12:49 PM IST

ಅವಳಿಗೆ 3ನೇ ಮದುವೆ ಅವನಿಗೆ ಎರಡನೆಯದ್ದು..!
ಹೆಂಡತಿಯ ಹೆಣ ಹಾಕಿ ಪೊಲೀಸ್ ಠಾಣೆಗೆ ಬಂದಿದ್ದ..!
ಗೃಹಪ್ರವೇಶಕ್ಕೆ ಹೋಗಿ ಬಂದ ಮೇಲೆ ಜಗಳ ಶುರು..!

ಅವರಿಬ್ಬರು ಸರ್ಕಾರಿ ಅಧಿಕಾರಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿಯಾಗಿ(Health Officer) ಅವರಿಬ್ಬರು ಒಂದೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ರು. ಕೆಲಸದ ಜಾಗದಲ್ಲಾದ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಲವ್ ಮಾಡಿ ಮದುವೆಯಾಗಿದ್ರು. 2 ವರ್ಷ ಸುಖವಾಗಿ ಸಂಸಾರ ಮಾಡಿದ್ರು. ಆದ್ರೆ ಆವತ್ತೊಂದು ದಿನ ಗಂಡ ಪ್ರೀತಿಸಿ(Love) ಮದುವೆಯಾದವಳನ್ನೇ ಕೊಂದು(Murder) ಮುಗಿಸಿದ್ದ. ಅಷ್ಟೇ ಅಲ್ಲ ಮನೆಯಲ್ಲಿ ಹೆಣ ಹಾಕಿ ಪೊಲೀಸ್ ಠಾಣೆಗೆ ಬಂದು ಸರೆಂಡರ್ ಕೂಡ ಆಗಿದ್ದ. ಶ್ರೀಕಾಂತ ಹೆಂಡತಿಯ ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆಗಿದ್ದ.. ಪೊಲೀಸರು ಆಶ್ಚರ್ಯದಿಂದಲೇ ಅವನನ್ನ ವಷಕ್ಕೆ ಪಡೆದು ನಂತರ ಸ್ಪಾಟ್ಗೆ ಹೋದ ಪೊಲೀಸರು ಮೃತದೇಹವನ್ನ ಪೋಸ್ಟ್ ಮಾರ್ಟಮ್ಗೆ ಕಳುಹಿಸಿದ್ರು. ಬಳಿಕ ಕೇಸ್ ದಾಖಲಿಸಿಕೊಂಡು ಶ್ರೀಕಾಂತನ ವಿಚಾರಣೆ ಆರಂಬಿಸಿದ್ರು. ಆಗ ಆತ ತನ್ನ ಕಥೆಯನ್ನ ಹೇಳೋದಕ್ಕೆ ಶುರು ಮಾಡಿದ.. ಆತ ಹೇಳಿದ ಮೊದಲ ವಾಕ್ಯವೇ ಪೊಲೀಸರ ತಲೆ ತಿರುಗುವಂತೆ ಮಾಡಿತ್ತು. ಕಾರಣ ಆಕೆಗೆ ಡಿಂಪಲ್ ಎರಡನೇ ಹೆಂಡತಿಯಾದ್ರೆ ಡಿಂಪಲ್ಗೆ ಶ್ರೀಕಾಂತ ಮೂರನೇ ಗಂಡ. ಒಪ್ಪಂದಗಳನ್ನ ಮಾಡಿಕೊಂಡು ಆದ ಮದುವೆ ಮೂರು ವರ್ಷ ಬಾಳಲ್ಲಿಲ್ಲ. ಪ್ರೀತಿಸಿ ಮದುವೆಯಾದವನೇ ಡಿಂಪಲ್ ಕಥೆ ಮುಗಿಸಿದ್ದಾನೆ. ಮದುವೆ ಅನ್ನೋದು ಕಮಿಟ್ಮೆಂಟ್ ಹೌದು.. ಆದ್ರೆ ಅದು ಅಗ್ರಿಮೆಂಟ್ವರೆಗೆ ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಶ್ರೀಕಾಂತ ಮತ್ತು ಡಿಂಪಲ್ ಸಂಸಾರವೇ ಸಾಕ್ಷಿ. ಇನ್ನೂ ಕೆಲ ಒಪ್ಪಂದಗಳನ್ನ ಮಾಡಿಕೊಂಡು ಮದುವೆಯಾದ ಅವರಿಬ್ಬರು ಎರಡು ವರ್ಷ ಚೆನ್ನಾಗೇ ಇದ್ರು. ಇಬ್ಬರಿಗೂ ಒಂದು ಮಗು ಕೂಡ ಆಯ್ತು. ಆದ್ರೆ ಇತ್ತಿಚೆಗೆ ಶ್ರೀಕಾಂತನಿಗೆ ಹೆಂಡತಿ ಮೇಲೆ ಲೈಟಾಗಿ ಡೌಟ್ ಶುರುವಾಗಿತ್ತು. ಆ ಡೌಟ್ ಹೆಂಡತಿಯ ಹೆಣ ಹಾಕುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ:  ರಣ್ ಬೀರ್ ಕಪೂರ್ ಸಿನಿಮಾನ ಮಿಸ್ ಮಾಡ್ಕೊಂಡ ಸೌತ್ ಸ್ಟಾರ್..ಅನಿಮಲ್ ಚಿತ್ರ ಮಹೇಶ್ ಬಾಬು ಯಾಕೆ ಮಾಡಲಿಲ್ಲ ?

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more