ಮಚ್ಚಿನಿಂದ ಪತ್ನಿ ಕೊಚ್ಚಿ ಕೊಂದ ಪತಿ: ಮಾವನ ಮೇಲೂ ಮಾರಣಾಂತಿಕ ಹಲ್ಲೆ

ಮಚ್ಚಿನಿಂದ ಪತ್ನಿ ಕೊಚ್ಚಿ ಕೊಂದ ಪತಿ: ಮಾವನ ಮೇಲೂ ಮಾರಣಾಂತಿಕ ಹಲ್ಲೆ

Published : Sep 13, 2023, 10:10 AM IST

ಕೌಟುಂಬಿಕ ಕಲಹದಿಂದ ಗ್ರಾಮವೇ ಆತಂಕದಲ್ಲಿರುವಂತೆ ಮಾಡಿದೆ. ಡೈವರ್ಸ್ ಕೇಳಿದ್ದಕ್ಕೆ ಪತಿಯ ಹತ್ಯೆ ನಡೆದಿದೆ. ಅತ್ತೆ ನಾದನಿಯೂ ಮಚ್ಚಿನಿಂದ ಹಲ್ಲೆಗೊಳಾಗಿದ್ದಾರೆ,ಜೊತೆಗೆ ಕೊಲೆ ಮಾಡಿದ ಆರೋಪಿ ಕೂಡಾ ಪೊಲೀಸರ ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದಾನೆ.
 

ಮಚ್ಚು ಹಿಡಿದು ಬಂದ ಕಿರಾತಕ ಕೊಚ್ಚುತ್ತಿರುವ ಈ ದೃಶ್ಯ ನೋಡಿ.. ಅಬ್ಬಬ್ಬಾ ಭಯಾನಕ. ಒಂದೇ ಸಮನೆ ಪತ್ನಿಯನ್ನು ಆತ ಕೊಚ್ಚುತ್ತಿದ್ದರೆ, ಮಗಳನ್ನ ಉಳಿಸಿಕೊಳ್ಳಲು ಬಂದ ಮಾವನಿಗೂ ಮಚ್ಚಿನೇಟು ಕೊಟ್ಟಿದ್ದಾನೆ. ಕೊನೆಗೂ ಕಿರಾತಕ ಆಕೆಯನ್ನು ಬದುಕಲು ಬಿಡಲೇ ಇಲ್ಲ. ಇದು ಕೋಲಾರ(Kolar) ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದ ಭಯಾನಕ ದೃಶ್ಯ. ಪತ್ನಿಯನ್ನು ಅಮಾನುಶವಾಗಿ ಕೊಂದ ಹಂತಕನ ಹೆಸರು ನಾಗೇಶ್. ಶ್ರೀನಿವಾಸಪುರ ಪಟ್ಟಣದಲ್ಲಿ ಮಟನ್ ಅಂಗಡಿ ಇಟ್ಟುಕೊಂಡಿದ್ದ ಈತ ಎರಡನೇ ಮದುವೆಯಾಗಿದ್ದಾನೆ. ಆದ್ರೆ ಮೊದಲ ಪತ್ನಿ ರಾಧಾ ಜೀವಂತವಿದ್ದಾಳೆ. ತನ್ನ ತವರು ಮನೆ ನಂಬಿಹಳ್ಳಿ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಹಾಕಿಕೊಂಡು, ಟೈಲರಿಂಗ್ (Tailoring) ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಎರಡನೇ ಮದುವೆಯಾದ ನಾಗೇಶ್ ಬಳಿ ಈಕೆ ವಿಚ್ಛೇದನ(Divorce) ಕೇಳಿದ್ದಾಳೆ. ಇದಕ್ಕೆ ಸಿಟ್ಟಿಗೆದ್ದ ನಾಗೇಶ್ ನಿನ್ನೆ ಸಂಜೆ ತನ್ನ ಮಟನ್ ಅಂಗಡಿಯಲ್ಲಿದ್ದ ಮಚ್ಚು ಹಿಡಿದು ಪತ್ನಿಯ ಮನೆಗೆ ಬಂದಿದ್ದಾನೆ.. ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಪತ್ನಿ ರಾಧಾಳನ್ನು ಕೊಲೈಗೈದಿದ್ದಾನೆ. ಮಗಳ ಹತ್ಯೆ ತಡೆಯಲು ಬಂದ ಮಾವ ಮುನಿರಾಜು ಮೇಲೂ ನಾಗೇಶ್ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಾಧಾಳನ್ನು ಕೊಚ್ಚಿ ಕೊಲೆಗೈದ ನಾಗೇಸ್ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ನಾಗೇಶ್ನನ್ನು ಸುತ್ತುವರಿದು ಆತನ ಕೊಲೆಗೆ(Murder) ಮುಂದಾಗಿದ್ದಾರೆ. ಆಗ ಮಚ್ಚು ಸಮೇತ ಮನೆಯೊಂದಕ್ಕೆ ನುಗ್ಗಿದ ನಾಗೇಶ್ನನ್ನು ಮನೆ ಸಮೇತ ಪೆಟ್ರೋಲ್ ಸುರಿದು ಬೆಂಕಿ ಇಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರನ್ನು ತಡೆದು, ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಗ್ರಾಮಸ್ಥರ ನೆಮ್ಮದಿ ಕೊಳ್ಳಿ ಇಟ್ಟ LLP ಕಾರ್ಖಾನೆ: ಕಾರ್ಖಾನೆ ದುರ್ವಾಸನೆಗೆ ಗ್ರಾಮಸ್ಥರ ಬದುಕೇ‌ ದುಸ್ಥರ !

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more