ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

Published : Dec 14, 2023, 02:59 PM IST

7 ವರ್ಷ ಜೊತೆಯಲ್ಲಿದ್ದವಳನ್ನೇ ಕೊಂದುಬಿಟ್ಟ..!
ಗಂಡನ ಪ್ರೇಯಸಿಯನ್ನ ಬೇಡಿಕೊಂಡಿದ್ದಳು..!
ಅವಳ ಕೊಲೆಗೆ ಕಾರಣವಾದವಳು ಮತ್ತೊಬ್ಬಳು..!

ಅವರು ಪ್ರೀತಿಸಿ ಮದುವೆಯಾದವರು. ಕಷ್ಟ ಪಟ್ಟು ದುಡಿದು ಇಬ್ಬರೂ ಮೇಲೆ ಬಂದವರು. ಇವರಿಬ್ಬರಿಗೂ ಒಂದು ಮುದ್ದಾದ ಮಗು ಕೂಡ ಆಗಿತ್ತು. ಯಾವುದೇ ಕಷ್ಟ ತೊಂದರೇ ಏನೂ ಇರಲಿಲ್ಲ. ಆದ್ರೆ ಆವತ್ತು 4 ದಿನ ಆರಾಮಾಗಿ ಇರೋಣ ಅಂತ ತಮ್ಮ ಊರಿಗೆ ಬಂದಿದ್ರು. 4 ದಿನ ಏಂಜಾಯ್ ಕೂಡ ಮಾಡಿದ್ರು. ಆದ್ರೆ 5ನೇ ದಿನ ಹೆಂಡತಿ ಹಾರ್ಟ್ ಅಟ್ಯಾಕ್‌ನಿಂದ(Heart attack) ಸತ್ತು ಹೋಗಿದ್ಲು. ಮನೆಮಗಳು ಸತ್ತ ವಿಷಯ ಕೇಳಿ ಆಕೆಯ ತವರುಮನೆಯವರೆಲ್ಲಾ ಬಂದ್ರು. ಆದ್ರೆ ಸ್ಪಾಟ್ಗೆ ಬಂದಾಗ ತಮ್ಮ ಮಗಳ ಸಾವಿನ ಬಗ್ಗೆ ಹೆತ್ತವರಿಗೆ ಅನುಮಾನ ಮೂಡೋಕೆ ಶುರುವಾಗಿತ್ತು. ಈ ಸಾವು ಸಹಜದಲ್ಲ ಅನ್ನೋ ಸಂಶಯ ಅವರದ್ದಾಗಿತ್ತು. ಅನುಮಾನದಿಂದಲೇ ಪೊಲೀಸ್ ಕಂಪ್ಲೆಂಟ್ ಕೊಟ್ಟರು. ಇನ್ನೂ ಯಾವಾಗ ಪೊಲೀಸರು(Police) ಬಂದರೋ ಹೆಂಡತಿಯ ಸಾವಿನ ಬಗ್ಗೆ ಒಂದೊಂದೇ ಸ್ಫೋಟಕ ಸತ್ಯಗಳು ಹೊರಗೆ ಬಂದವು. ಶ್ವೇತಾ ಹಾರ್ಟ್ಅಟ್ಯಾಕ್‌ನಿಂದ ಸತ್ತಿಲ್ಲ. ಇನ್ನೂ ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಆಕೆಯ ದೇಹದಲ್ಲಿ ಕೆಮಿಕಲ್ ಅಂಶ ಸೇರಿಕೊಂಡಿದೆ. ಅದೇ ಆಕೆಯ ಸಾವಿಗೆ ಕಾರಣ ಅಂತ ಹೇಳಿಬಿಟ್ರು. ಇನ್ನೂ ಯಾವಾಗ ಗಂಡ ಹೇಳಿದ್ದು ಸುಳ್ಳು ಅಂತ ಗೊತ್ತಾಯ್ತೋ ಪೊಲೀಸರು ಆತನ ವಿಚಾರಣೆ ಶುರು ಮಾಡ್ತಾರೆ. ಆಗಲೇ ನೋಡಿ ಆತ ಸತ್ಯ ಒಪ್ಪಿಕೊಳ್ಳೋದು. ಪ್ರೀತಿಸಿ(Love) ಮದುವೆಯಾದವಳನ್ನೇ ದರ್ಶನ್ ಕೊಂದು ಮುಗಿಸಿದ್ದ.

ಆದ್ರೆ ಅದಕ್ಕೆ ಕಾರಣ ಅವನ ಅನೈತಿಕ ಸಂಬಂಧ. ತಾನು ಕೆಲಸ ಮಾಡ್ತಿದ್ದ ಜಾಗದಲ್ಲಿ ಪರಿಚಯವಾದವಳ ಜೊತೆಯಲ್ಲಿ ದರ್ಶನ್ ಸಂಬಂದ ಬೆಳಸಿಕೊಂಡಿದ್ದ. ಆ ವಿಷಯ ಶ್ವೇತಾಗೆ ಗೊತ್ತಾಗಿಬಿಡುತ್ತೆ. ಇದೇ ವಿಷಯಕ್ಕೆ ಆಗಾಗ ಜಗಳವಾಗ್ತಿರುತ್ತೆ. ಆದ್ರೆ ಈತನಿಗೆ ಹೆಂಡತಿಗಿಂತ(Wife) ಪ್ರೇಯಸಿಯೇ ಹೆಚ್ಚಾಗಿಬಿಟ್ಟಿರುತ್ತೆ. ಶ್ವೇತಾ ಆಗಾಗ ಗಂಡನ ಪ್ರೇಯಿಸಿಗೆ ಕಾಲ್ ಮಾಡಿ ತನ್ನ ಗಂಡನ ವಿಷಯಕ್ಕೆ ಬರಬೇಡ ಅಂತಲೂ ಹೇಳುತ್ತಿರುತ್ತಾಳೆ. ಆದ್ರೆ ದರ್ಶನ್ ತನ್ನ ಅನೈತಿಕ ಸಂಬಂದಕ್ಕೆ ಹೆಂಡತಿ ಅಡ್ಡಿಯಾಗ್ತಿದ್ದಾಳೆ ಅನ್ನೋ ಕಾರಣಕ್ಕೆ ಪಕ್ಕಾ ಪ್ಲಾನ್ ಮಾಡಿ ಜೊತೆಗೆ ಒಂದು ಸೈನೈಡ್ ಡಬ್ಬಿಯನ್ನೂ ತೆಗೆದುಕೊಂಡು ಚಿಕ್ಕಮಗಳೂರಿಗೆ ಹೋಗಿಬರೋಣ ಅಂತ ಆಕೆಯನ್ನ ಪುಸಲಾಯಿಸಿ ಕರೆದುಕೊಂಡು ಹೋಗ್ತಾನೆ. ಅವಳ ಆ ಚಿಕ್ಕಮಗಳೂರು ಜರ್ನಿಯೇ ಕೊನೆಯ ಜರ್ನಿಯಾಗಿಬಿಡುತ್ತೆ. ಏಳು ವರ್ಷದ ಮಡದಿ ಪ್ರೀತಿ ಬೇಜಾರಾಗಿತ್ತು. ಜೇಬಲ್ಲಿದ್ದ ದುಡ್ಡು ಬುದ್ಧಿಗೆ ಮಂಕುಬೂದಿ ಎರಚಿತ್ತು. ಕಷ್ಟಕ್ಕೆ ನೊಗವಾಗಿದ್ದ ಪತ್ನಿಗಿಂತ ಪರಸ್ತ್ರೀಯ ಮಾದಕ ನಗು ಮಡದಿಯನ್ನ ಮುಗಿಸುವ ಮಸಲತ್ತು ಮಾಡಿಸಿತ್ತು. ಅಂದುಕೊಂಡಂತೆ ಪತ್ನಿಯನ್ನೇನೋ ಮುಗಿಸಿದ. 

ಇದನ್ನೂ ವೀಕ್ಷಿಸಿ:  ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more