Bengaluru Crime: ಕೊಲೆಗಾರನ ಸುಳಿವು ಕೊಟ್ಟಿದ್ದು ಶ್ವಾನ..! ಹೆಣ ಹಾಕಿ ಹೆಂಡತಿ ಪಕ್ಕ ಮಲಗಿದ್ದ..!

Bengaluru Crime: ಕೊಲೆಗಾರನ ಸುಳಿವು ಕೊಟ್ಟಿದ್ದು ಶ್ವಾನ..! ಹೆಣ ಹಾಕಿ ಹೆಂಡತಿ ಪಕ್ಕ ಮಲಗಿದ್ದ..!

Published : Feb 27, 2024, 05:42 PM IST

ಸಿಸಿ ಟಿವಿಯಲ್ಲಿ ಸಿಕ್ಕಿತ್ತು ಹಂತಕನ ಸುಳಿವು..!
ಹಣ ಬರುವ ವಿಚಾರ ಆರೋಪಿಗೆ ತಿಳಿದುಬಿಟ್ಟಿತ್ತು!
ಲಕ್ಷದ ಆಸೆಯಲ್ಲಿದ್ದವನಿಗೆ ಸಿಕ್ಕಿದ್ದು ಬಿಡಿಗಾಸು..!

ಆಕೆ 70 ವರ್ಷದ ಅಜ್ಜಿ. ತನ್ನ ಮಗಳು ಮೊಮ್ಮಗಳೊಂದಿಗೆ ಬೆಂಗಳೂರಿನಲ್ಲಿ(Bengaluru) ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸ ಮಾಡ್ತಿದ್ದಳು. ಬೆಳಗ್ಗೆ ಸಂಜೆ ವಾಕಿಂಗ್, ಅಕ್ಕಪಕ್ಕದವರ ಜೊತೆ ಹರಟೆ ಮಿಕ್ಕ ಸಮಯದಲ್ಲಿ ಮೊಮ್ಮಗಳೊಂದಿಗೆ ಆಟ. ಇಷ್ಟೇ ಆಕೆಯ ಫುಲ್ ಟೈಂ ಕೆಲಸ. ಹೀಗಿದ್ದ ಅಜ್ಜಿ ಆವತ್ತೊಂದು ದಿನ ಕೊಲೆಯಾಗಿ(Murder) ಹೋಗಿದ್ದಳು. ಹಂತಕ ಆಕೆಯನ್ನ ತುಂಡು ತುಂಡು ಮಾಡಿ ಡ್ರಂನಲ್ಲಿ ತುಂಬಿ ಆಕೆಯ ಮನೆಯ ಪಕ್ಕದಲ್ಲೇ ಇಟ್ಟು ಹೋಗಿದ್ದ. ದಿನೇಶ ತಾನೇ ಸುಶೀಲಮ್ಮನನ್ನ ಕೊಂದಿದ್ದು ಅಂತ ಒಪ್ಪಿಕೊಂಡಿದ್ದ. ಆದ್ರೆ ಆರಂಭದಲ್ಲಿ ಪೊಲೀಸರಿಗೆ ಕಥೆಯೊಂದನ್ನ ಹೇಳಿದ್ದ.. ಆದ್ರೆ ಆ ಕಥೆಯನ್ನ ನಂಬದ ಪೊಲೀಸರು ಅವನನ್ನ ಬೇರೆ ಸ್ಟೈಲ್‌ನಲ್ಲಿ ವಿಚಾರಣೆ ಮಾಡಿದ್ರು. ಆಗಲೇ ಈ ದಿನೇಶ ಆವತ್ತು ನಡೆದ ಘಟನೆ ಬಗ್ಗೆ ವಿವರವಾಗಿ ಹೇಳಿದ್ದು.. ಅಜ್ಜಿಯನ್ನ(Old Woman) ತುಂಡು ತುಂಡು ಮಾಡಿ ಡ್ರಂನಲ್ಲಿ ತುಂಬಿದ ಭಿಕರ ಕೃತಯ್ಯವನ್ನ ವಿವರಿಸೋದು. ಚುನಾವಣೆ ಸಂದರ್ಭದಲ್ಲಿ ಪರಿಚಯವಾದ ದಿನೇಶನನ್ನ ಅಜ್ಜಿ ನಂಬಿಬಿಟ್ಟಿದ್ದಳು. ಇದೇ ಕಾರಣಕ್ಕೆ ಆಕೆಯ ಆಸ್ತಿ ಮಾರಾಟದ ವಿಷಯವನ್ನ ಆಕೆ ಆತನ ಬಳಿ ಹೇಳಿಕೊಂಡಿದ್ದಳು. ಆದ್ರೆ ಯಾವಾಗ ಆಕೆಗೆ ಕೋಟಿ ಹಣ(Money) ಬರುತ್ತೆ ಅಂತ ಗೊತ್ತಾಯ್ತೋ ದಿನೇಶ ಒಂದಷ್ಟು ಮೊತ್ತವನ್ನ ಸಾಲವಾಗಿ ಕೇಳಿದ್ದ. ಆದ್ರೆ ಸುಶೀಲಮ್ಮ ಆರಂಭದಲ್ಲಿ ಕೊಡ್ತೀನಿ ಅಂತ ಹೇಳಿದ್ರೂ ನಂತರ ಸಾಲ ಕೊಡೋಕೆ ಒಪ್ಪೋದಿಲ್ಲ. ಇದು ದಿನೇಶನ ಕೋಪಕ್ಕೆ ಕಾರಣವಾಗಿತ್ತು. ಅದೇ ಕೋಪದಲ್ಲಿ ಆವತ್ತೊಂದು ದಿನ ಮನೆಗೆ ಕರೆಸಿಕೊಂಡು ಅವಳ ಕಥೆ ಮುಗಿಸಿದ.. ಆಕೆ ಮೈಮೇಲಿದ್ದ ಚಿನ್ನಾಭರಣವನ್ನೆಲ್ಲಾ ತೆಗೆದುಕೊಂಡು ಮಾರಟ ಮಾಡಲು ಹೋದ.. ಆದ್ರೆ ಆ ಚಿನ್ನವೂ ನಖಲಿಯಾಗಿತ್ತು. ಕೊನೆ ಕಾಲದಲ್ಲಿ ಆಕೆಗೆ ಬರಲಿದ್ದ ಹಣದ ಬಗ್ಗೆ ಹೇಳಿಕೊಂಡಿದ್ದೇ ವೃದ್ಧಗೆ ಮುಳುವಾಗಿತ್ತು. ದುರಂತ ಅಂದ್ರೆ ಆಕೆಯ ಮೇಲಿದ್ದ ನಕಲಿ ಸರಗಳ ಕಂಡು ಚಿನ್ನದ ಸರ ಎಂದು ಭಾವಿಸಿದ ಪಕ್ಕದ ಮನೆಯವನೇ ಆಕೆಯ ಜೀವ ತೆಗೆದಿದ್ದಾನೆ.

ಇದನ್ನೂ ವೀಕ್ಷಿಸಿ:  ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more